ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಕ್ತಿಯ ಪರಾಕಾಷ್ಠೆಯೋ, ಹುಚ್ಚುತನವೋ ತಿಳಿಯದು. ಭಕ್ತನೊಬ್ಬ ದೇವಿಗೆ ತನ್ನ ನಾಲಿಗೆಯನ್ನೇ ಕತ್ತರಿಸಿ ಅರ್ಪಿಸಿದ ಭೀಕರ ಘಟನೆ ಉತ್ತರಪ್ರದೇಶದಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಬಳಿಕ ಅಧಿಕ ರಕ್ತಸ್ರಾವವಾಗಿ ಆತನ ಸ್ಥಿತಿ ಚಿಂತಾಜನಕವಾಗಿದೆ.
ಬ್ಲೇಡ್ನಿಂದ ನಾಲಿಗೆ ಕಟ್
ಇಲ್ಲಿನ ಶೀತಲ ಮಾತೆಯ ದೇಗುಲಕ್ಕೆ ಈ ಭಕ್ತ ಭೇಟಿ ನೀಡಿದ್ದ. ಪತ್ನಿಯೊಂದಿಗೆ ಗಂಗಾನದಿಯಲ್ಲಿ ಸ್ನಾನ ಮಾಡಿದ ಆತ ಬಳಿಕ ಮಾತೆಯ ದೇಗುಲಕ್ಕೆ ಪೂಜೆಗೆ ಬಂದಿದ್ದು, ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ನಮಸ್ಕರಿಸು ಎಂದು ಪತ್ನಿಗೆ ತಿಳಿಸಿದ್ದಾನೆ. ಪತ್ನಿ ಶಿರಬಾಗಿ ನಮಿಸುವಾಗ ಆತ ಇದ್ದಕ್ಕಿದ್ದಂತೆ ಬ್ಲೇಡ್ನಿಂದ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ.
ಭಕ್ತನ ಸ್ಥಿತಿ ಚಿಂತಾಜನಕ
ಪತಿಯ ಬಾಯಿಂದ ರಕ್ತ ಚಿಮ್ಮುತ್ತಿರುವುದನ್ನು ಕಂಡ ಪತ್ನಿ ಕಿರುಚಾಡಿದ್ದು, ತಕ್ಷಣವೇ ಅಲ್ಲಿದ್ದವರ ಸಹಾಯದಿಂದ ನಾಲಿಗೆ ಕತ್ತರಿಸಿಕೊಂಡ ಭಕ್ತವತ್ಸಲನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.