ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಚಾಲನೆಗೆ ಕ್ಷಣಗಣನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಬೆಂಗಳೂರಿನ ಪ್ರಸಿದ್ಧ ಕರಗ ಉತ್ತವ ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಜಾತ್ರೆಗೆ ಇಂದು ಚಾಲನೆ ದೊರೆಯಲಿದೆ.

ಮಾರ್ಚ್ 29ರಿಂದ ಏಪ್ರಿಲ್ 8ರ ತನಕ ಬೆಂಗಳೂರಿನಲ್ಲಿ ಈ ಅದ್ದೂರಿ ಐತಿಹಾಸಿಕ ಉತ್ಸವ ನಡೆಯಲಿದೆ. ದೇವಸ್ಥಾನದ ಆವರಣದಲ್ಲಿ ನಿತ್ಯ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಕರಗ ಉತ್ಸವ ಪ್ರಾರಂಭವಾಗಲಿದೆ.

ಇಂದು ರಾತ್ರಿ 10ಕ್ಕೆ ರಥೋತ್ಸವ ಹಾಗೂ ಮುಂಜಾನೆ 3ಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಬೆಂಗಳೂರು ಕರಗ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಮಸ್ತಾನ್ ಸಾಬ್ ದರ್ಗಾಕ್ಕೂ ಕರಗ ಹೋಗಲಿದೆ. ಅಲ್ಲದೆ ಈ ವರ್ಷ ಕೂಡ ಜ್ಞಾನೇಂದ್ರ ಕರಗ ಹೊರಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!