ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾಳಿ, ಪ್ರತಿ ದಾಳಿಯಿಂದ ತತ್ತರಿಸುತ್ತಿರುವ ಮಣಿಪುರದಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಮಾಡಲು ಸ್ವತಃ ಕೇಂದ್ರ ಗೃಹ ಸಚಿವರೇ ಕ್ಷೇತ್ರಕ್ಕೆ ಬರಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಜೆ ಮಣಿಪುರ ರಾಜಧಾನಿ ಇಂಫಾಲ್ ತಲುಪಲಿದ್ದಾರೆ. ನಾಲ್ಕು ದಿನಗಳ ಕಾಲ ಅಲ್ಲಿಯೇ ವಾಸ್ತವ್ಯ ಹೂಡಿ ಎರಡು ಗುಂಪುಗಳ ಜತೆ ಶಾಂತಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಗೃಹ ಸಚಿವರು ಜೂನ್ 1ರವರೆಗೆ ನಾಲ್ಕು ದಿನಗಳ ಕಾಲ ಮಣಿಪುರದಲ್ಲಿ ತಂಗಲಿದ್ದಾರೆ. ಜೊತೆಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಎರಡು ದಿನಗಳ ಹಿಂದೆ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಿದರು. ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿರುವಾಗಲೇ ಭಾನುವಾರ ಹಲವು ಎನ್ಕೌಂಟರ್ಗಳು ನಡೆದಿರುವುದು ಆತಂಕಕಾರಿಯಾಗಿದೆ. ಸೇನಾ ಮುಖ್ಯಸ್ಥರ ಉಪಸ್ಥಿತಿ ಮತ್ತು ಶಾಂತಿ ಮತ್ತು ಭದ್ರತೆಯ ಪರಿಶೀಲನೆಯ ಹೊರತಾಗಿಯೂ, ಇಂಫಾಲ್ ಕಣಿವೆಯಲ್ಲಿ ಶಾಂತಿಯುತ ವಾತಾವರಣವಿಲ್ಲ.
ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂಫಾಲ ತಲುಪಲಿದ್ದಾರೆ. ಮೈತೇಯಿ-ಕುಕಿ ಎರಡೂ ಗುಂಪುಗಳು ಸಾಮಾನ್ಯ ಪರಿಸ್ಥಿತಿಗಳನ್ನು ಸ್ಥಾಪಿಸಲು ಶಾಂತಿ, ತಾಳ್ಮೆಯಿಂದಿರಿ ಎಂದು ಕೇಂದ್ರ ಗೃಹ ಸಚಿವರು ಮನವಿ ಮಾಡಿದ್ದಾರೆ. ಕೇಂದ್ರ ಗೃಹ ಸಚಿವರು ಎರಡೂ ಸಮುದಾಯಗಳೊಂದಿಗೆ ಪ್ರತ್ಯೇಕವಾಗಿ ಚರ್ಚಿಸಲಿದ್ದಾರೆ. ಎರಡೂ ಸಮುದಾಯಗಳೊಂದಿಗೆ ಪೂರ್ಣ ಮಾತುಕತೆ ನಡೆಸಿ ಶಾಂತಿಯುತ ವಾತಾವರಣ ನಿರ್ಮಿಸುವ ಮುಖ್ಯ ಉದ್ದೇಶದಿಂದ ಅಮಿತ್ ಶಾ ಇಂಫಾಲಕ್ಕೆ ಭೇಟಿ ನೀಡಲಿರುವಂತಿದೆ. ಮಣಿಪುರದಲ್ಲಿ ಮೇ 3 ರಿಂದ ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಿಂದಾಗಿ ಅಶಾಂತಿ ನೆಲೆಸಿದೆ. ಅಂದಿನಿಂದ ಮಣಿಪುರದಲ್ಲಿ ಇಂಟರ್ನೆಟ್ ಅನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿ 34 ಸಾವಿರ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.