ದಿನ ಭವಿಷ್ಯ | ಎಂದಿಗಿಂತ ಹೆಚ್ಚು ಹೊಣೆ ಹೆಗಲೇರುವುದು, ಅದನ್ನು ಸೂಕ್ತವಾಗಿ ನಿಭಾಯಿಸಿ


ಹೊಸದಿಗಂತ ಡಿಜಿಟಲ್‌ ಡೆಸ್ಕ್

ಮೇಷ
ಧಾರ್ಮಿಕ ವಿಚಾರಗಳು ಆಸಕ್ತಿ ಕೆರಳಿಸಬಹುದು. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ. ಕೌಟುಂಬಿಕ ಆದ್ಯತೆಗಳು ಹೆಚ್ಚು. ಅದನ್ನು ಚೆನ್ನಾಗಿ ನಿಭಾಯಿಸಿರಿ.

ವೃಷಭ
ನಿಮ್ಮ ಸುತ್ತಲಿನ ಜನರೊಂದಿಗೆ ಮಾತಿನ ಜಗಳ ನಡೆದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಹಣಕಾಸು ಸಮಸ್ಯೆ ಕಾಡುವುದು.

ಮಿಥುನ
ಆಹಾರದಲ್ಲಿ ಹಿತಮಿತ ಸಾಧಿಸಿ. ಇಲ್ಲವಾದರೆ ಹೊಟ್ಟೆ ಸಮಸ್ಯೆಗೆ ಗುರಿಯಾಗುವಿರಿ. ವೃತ್ತಿಯಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ.

ಕಟಕ
ಇಂದು ಎಲ್ಲವೂ ನಿಮಗೆ ಪೂರಕವಾಗಿ ನಡೆದರೂ ಮನಸ್ಸಿಗೆ ಮಾತ್ರ ಶಾಂತಿಯಿಲ್ಲ. ಯಾವುದೋ ವಿಚಾರವು ಮನಸ್ಸನ್ನು ಕೊರೆಯುತ್ತಿರುತ್ತದೆ.

ಸಿಂಹ
ವೃತ್ತಿಯಲ್ಲಿ ಎಷ್ಟೇ ಒತ್ತಡ  ಇದ್ದರೂ ಕುಟುಂಬಸ್ಥರ ಬೇಕುಬೇಡ ವಿಚಾರಿಸಿ. ಅವರ ಬೇಡಿಕೆ ಈಡೇರಿಸಿ. ಇದರಿಂದ ಸಾಂಸಾರಿಕ ಸಾಮರಸ್ಯ ಮೂಡುವುದು.

ಕನ್ಯಾ
ಇಂದು ನಿಮಗೆ ಮಾನಸಿಕ ಅಸಹನೆ ಹೆಚ್ಚು. ಅದಕ್ಕೆ ಕಾರಣ ನಿಮ್ಮ ಕಾರ್ಯ, ಉದ್ದೇಶ ಸರಿಯಾಗಿ ಈಡೇರದಿರುವುದು.ಸಹನೆಯಿರಲಿ.

ತುಲಾ
ಬದುಕಿನಲ್ಲಿ ಆಶಾವಾದ ಇಟ್ಟುಕೊಳ್ಳಿ. ಸಣ್ಣ ಹಿನ್ನಡೆಗೆ ಅಧೀರರಾಗದಿರಿ. ನಿಮಗೆ ಪೂರಕ ಪರಿಸ್ಥಿತಿ ಬಂದೇ ಬರುವುದು.  ಕೌಟುಂಬಿಕ ಸಹಕಾರ.

ವೃಶ್ಚಿಕ
ಹಿರಿಯರೊಂದಿಗೆ ವ್ಯವಹರಿಸುವಾಗ ವಿಧೇಯತೆ ಇರಲಿ. ಇಲ್ಲವಾದರೆ ಅವರ ಅವಕೃಪೆಗೆ ತುತ್ತಾಗುವಿರಿ. ಕೌಟುಂಬಿಕ ವಾಗ್ವಾದ, ವೈಮನಸ್ಸು ಸಂಭವ.

ಧನು
ಪರಿಸ್ಥಿತಿ ನಿಮಗೆ ಪ್ರತಿಕೂಲವಾಗಿರುವಂತೆ ಕಂಡರೂ ವಾಸ್ತವದಲ್ಲಿ ನಿಮಗೇನೂ ಹಾನಿಯಾಗದು. ದಿನದಂತ್ಯಕ್ಕೆ ಎಲ್ಲವೂ ನಿಮ್ಮ ಪರವಾಗುವುದು.

ಮಕರ
ಎಂದಿಗಿಂತ ಹೆಚ್ಚು ಹೊಣೆ ಹೆಗಲೇರುವುದು. ಅದನ್ನು ಸರಿಯಾಗಿ ನಿಭಾಯಿಸಿ. ಉದಾಸೀನ ತೋರಿದರೆ ನಿಮಗೆ ಪ್ರತಿಕೂಲವಾದೀತು

ಕುಂಭ
ಬಹುಸಮಯದಿಂದ ಬಾಕಿ ಉಳಿಸಿದ್ದ ಕಾರ್ಯ ಪೂರೈಸಲು ಆದ್ಯತೆ ಕೊಡಿ. ನಿಮ್ಮ ದಕ್ಷತೆಯನ್ನು ಹಿರಿಯರು ಮೆಚ್ಚಿಕೊಳ್ಳುವರು. ಆರ್ಥಿಕ ಲಾಭ..

ಮೀನ
ಕೌಟುಂಬಿಕ ವಾಗ್ವಾದದಿಂದ ನೆಮ್ಮದಿ ನಾಶ. ಮಾತಿಗೆ ಮಾತು ಕೂಡಿಸದಿರಿ. ನೀವು ಮೌನ ತಾಳಿದರೆ ಅದರಿಂದ ಶಾಂತಿ ಮೂಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!