ದಿನಭವಿಷ್ಯ| ಕಷ್ಟ ಬಂದಾಗ ಇತರರ ನೆರವನ್ನು ಕೋರುವುದು ತಪ್ಪಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಬಂಧುಗಳ ಜತೆ ಮೃದುವಾಗಿ ವರ್ತಿಸಿ. ಸಣ್ಣ ಮನಸ್ತಾಪವೂ ದೊಡ್ಡದಾಗಿ ಬೆಳೆದೀತು.ತಾಳ್ಮೆಯಿಂದ ಮಾತಾಡಿ.  ನಿಮಗಿಂದು ಅಜೀರ್ಣ ಸಮಸ್ಯೆ ಕಾಡಬಹುದು.

ವೃಷಭ
ಸಂಬಂಧದಲ್ಲಿ ಸೌಹಾರ್ದ ಮತ್ತು ಸಮನ್ವಯತೆ. ವೃತ್ತಿಯಲ್ಲಿ ಸವಾಲು ಒದಗಿದರೂ ಅದು ನಿಮಗೆ ಹೊಸ ಅವಕಾಶ ಕೂಡ ಒದಗಿಸಲಿದೆ.

ಮಿಥುನ
ವೃತ್ತಿಯಲ್ಲಿ ಇಂದು ಇತರರಿಂದ ಹೆಚ್ಚು ಸಹಕಾರ ಪಡೆಯುವಿರಿ. ನಿಮ್ಮನ್ನು ಕಂಡರಾಗದವರೂ ಸಮೀಪವಾಗುವರು. ಕೌಟುಂಬಿಕ ನೆಮ್ಮದಿ.

ಕಟಕ
ಬಾಕಿ ಉಳಿದಿರುವ ಕಾರ್ಯ ಪೂರ್ಣ ಗೊಳಿಸಿ. ಅದನ್ನು ಇನ್ನಷ್ಟು ನನೆಗುದಿಗೆ ಇಡಬೇಡಿ. ಇತರರ ಸಹಾಯ ದೊರಕಲಾರದು. ಕೌಟುಂಬಿಕ ಅಸಹಕಾರ.

ಸಿಂಹ
ಕೆಲಸದಲ್ಲಿ ಸಣ್ಣ ವಿಷಯಕ್ಕೂ ಗಮನ ಕೊಡಿ. ಕೆಲವೊಮ್ಮೆ ಅದುವೇ ದೊಡ್ಡ ಸಮಸ್ಯೆ ಸೃಷ್ಟಿಸಬಹುದು. ಕೌಟುಂಬಿಕ ಸಮ್ಮಿಲನ. ಬಂಧುಗಳ ಭೇಟಿ.

ಕನ್ಯಾ
ನಿಮ್ಮ ನಿರೀಕ್ಷೆಯಂತೆ ನಡೆಯದು. ಕಾಲಮಿತಿ ಯಲ್ಲಿ ಕೆಲಸ ಮುಗಿಸಲು ವಿಫಲರಾಗುವಿರಿ. ಕೆಲವರಿಂದ ಅಸಮಾಧಾನ ಎದುರಿಸುವಿರಿ.

ತುಲಾ
ಕಷ್ಟ ಬಂದಾಗ ಇತರರ ನೆರವನ್ನು ಕೋರುವುದು ತಪ್ಪಲ್ಲ. ಬಿಗುಮಾನ ಬಿಟ್ಟು ವ್ಯವಹರಿಸಿ. ಇಲ್ಲವಾದರೆ ಏಕಾಂಗಿಯಾಗಿ ಸಮಸ್ಯೆ ಎದುರಿಸುವಿರಿ.

ವೃಶ್ಚಿಕ
ದಿನವಿಡೀ ಒಂದಿಲ್ಲೊಂದು ಒತ್ತಡ ಎದುರಿಸುವಿರಿ. ವೃತ್ತಿಯಲ್ಲಿ , ಖಾಸಗಿ ಬದುಕಲ್ಲಿ ಸಮಸ್ಯೆ. ಆರೋಗ್ಯದ ಕಡೆಗೂ ಗಮನ ಕೊಡಿ. ಕೋಪ ನಿಯಂತ್ರಿಸಿ.

ಧನು
ಆರ್ಥಿಕವಾಗಿ ಸದೃಢತೆ. ನಿಮ್ಮ ಹೊಸ ಚಿಂತನೆಗೆ ಮೇಲಧಿಕಾರಿಗಳ ಬೆಂಬಲ ಲಭ್ಯ. ಮನೆಯಲ್ಲಿ ಅನಾರೋಗ್ಯ ಕಾಡೀತು. ಎಚ್ಚರ ವಹಿಸಿ.

ಮಕರ
ಸಣ್ಣ ವಿವಾದಗಳು ಮನಶ್ಯಾಂತಿ ಕೆಡಿಸದಂತೆ ನೋಡಿಕೊಳ್ಳಿ. ದ್ವೇಷ ಇಟ್ಟುಕೊಳ್ಳಬೇಡಿ. ಸಂಧಾನದ ದಾರಿ ಶಾಂತಿಗೆ ಪೂರಕ. ಆರ್ಥಿಕ ಒತ್ತಡ.

ಕುಂಭ
ಕುಟುಂಬದಲ್ಲಿ ಭಿನ್ನಮತ ಮೂಡಿದರೂ ಮುಕ್ತ ಮಾತುಕತೆಯಿಂದ ಅದನ್ನು ಪರಿಹರಿಸಲು ಸಾಧ್ಯವಿದೆ. ನಿಮ್ಮ ನಿಲುವಿಗೇ ಅಂಟಿ ಕೂರದಿರಿ.

ಮೀನ
ಇತರರ ಜತೆ ವ್ಯವಹರಿಸುವಾಗ ನಿಮ್ಮ ಕೋಪದ ಮೇಲೆ ನಿಯಂತ್ರಣವಿಡಿ. ಮುಖ್ಯವಾಗಿ ಕುಟುಂಬಸ್ಥರ ಜತೆ ಸಹನೆಯಿಂದ ವರ್ತಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!