ಹಿಮಾಚಲ ಪ್ರದೇಶದಲ್ಲಿ ಭೀಕರ ಅಪಘಾತ: ಬಸ್ ಕಮರಿಗೆ ಬಿದ್ದು ನಾಲ್ವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿಮ್ಲಾ ಜಿಲ್ಲೆಯಲ್ಲಿ ಬಸ್ ಅಪಘಾತಕ್ಕೀಡಾಗಿ ಹಿಮಾಚಲ ಪ್ರದೇಶ ರಸ್ತೆ ಮತ್ತು ಸಾರಿಗೆ ನಿಗಮದ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ಜುಬ್ಬಲ್‌ನ ಕೆಂಚಿ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಶಿಮ್ಲಾ ಜಿಲ್ಲೆಯ ರೋಹ್ರು ಪ್ರದೇಶದಲ್ಲಿ ಕುದ್ದು-ದಿಲ್ತಾರಿಗೆ ತೆರಳುತ್ತಿದ್ದ ಬಸ್‌ ಪರ್ವತ ರಸ್ತೆಯಿಂದ ಕೆಳಗಿರುವ ಕಮರಿಗೆ ಬಿದ್ದಿದೆ.

“ಬೆಳಿಗ್ಗೆ 6:45 ಕ್ಕೆ ಅಪಘಾತ ಸಂಭವಿಸಿದೆ. ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ಒಟ್ಟು 5 ಪ್ರಯಾಣಿಕರು ಇದ್ದರು. ಮೂವರನ್ನು ರೋಹ್ರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ,” ಎಂದು ರೋಹನ್ ಚಂದ್ ಠಾಕೂರ್, ವ್ಯವಸ್ಥಾಪಕ ನಿರ್ದೇಶಕ, HRTC ತಿಳಿಸಿದ್ದಾರೆ.

ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಚಾಲಕ ಮತ್ತು ಕಂಡಕ್ಟರ್ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಮೃತರನ್ನು ಕರಮ್ ದಾಸ್ (ಚಾಲಕ), ರಾಕೇಶ್ ಕುಮಾರ್ (ಕಂಡಕ್ಟರ್), ಬಿರ್ಮಾ ದೇವಿ ಮತ್ತು ನೇಪಾಳ ನಿವಾಸಿ ಧನ್ ಶಾ ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ಜಿಯೇಂದರ್ ರಂಗ್ತಾ, ದೀಪಿಕಾ ಮತ್ತು ಹಸ್ತ್ ಬಹದ್ದೂರ್ ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!