ಹೊಸದಿಗಂತ ವಿಜಯಪುರ:
ಹಳೇ ವೈಷಮ್ಯದಿಂದ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ನಗರದ ಜಾಮೀಯಾ ಮಸೀದಿ ಬಳಿ ನಡೆದಿದೆ.
ಇಲ್ಲಿನ ಪೇಟಿ ಬಾವಡಿ ನಿವಾಸಿ ರಜೀನ್ ಜಮಾದಾರ್ ( 27 ) ಕೊಲೆಯಾದ ಯುವಕ. ರಜೀನ್ ಜಮಾದಾರ್ ಈತನನ್ನು ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.