ಹೊಸದಿಗಂತ ವರದಿಗಾರ ರಮೇಶ ಗೋರೇಬಾಳ್ ವಿಧಿವಶ

ಹೊಸದಿಗಂತ ವರದಿ, ರಾಯಚೂರು :

ಹೊಸದಿಗಂತ ವರದಿಗಾರ ರಮೇಶ ಗೋರೇಬಾಳ್ (೪೮) ಭಾನುವಾರ ಸಂಜೆ ತೀವ್ರ ಹೃದಯಾಘಾತದಿಂದ ಹೈದರಾಬಾದ್ ನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರು ಮಡದಿ, ಓರ್ವ ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ರಮೇಶ ಅವರು ಹೊಸದಿಗಂತ ದಿನಪತ್ರಿಕೆಯ ರಾಯಚೂರು ಜಿಲ್ಲೆಯ ಅರೆಕಾಲಿಕ ವರದಿಗಾರರಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ರಮೇಶ ಗೋರೆಬಾಳ ನಿಧನಕ್ಕೆ ಹೊಸದಿಗಂತ ಆಡಳಿತ ಮಂಡಳಿ ತೀವ್ರ ಸಂತಾಪ ಸೂಚಿಸಿದೆ. ರಾಯಚೂರ ರಿಪೋರ್ಟ್‌ಸ್ಸ್ ಗಿಲ್ಡ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,
ರಾಯಚೂರು ಪತ್ರಿಕಾ ಸಂಪಾದಕರ ಸಂಘ ಸಂತಾಪ ವ್ಯಕ್ತಪಡಿಸಿವೆ.

ಅವರ ಅಂತ್ಯ ಸಂಸ್ಕಾರವು ಸ್ವಗ್ರಾಮ ಬಾಗಲಕೋಟಿ ಜಿಲ್ಲಾ ಇಳಕಲ್ ತಾಲೂಕಿನ ಕರಡಿ ಗ್ರಾಮದಲ್ಲಿ ಸೊಮವಾರ ಮಧ್ಯಾಹ್ನ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!