ದಿನಭವಿಷ್ಯ| ಕಠಿಣ ಶ್ರಮ ಪಟ್ಟರೂ ಇಂದು ನಿಮ್ಮ ಉದ್ದೇಶ  ಈಡೇರುವುದು ಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಕಠಿಣ ಶ್ರಮ ಪಟ್ಟರೂ ಇಂದು ನಿಮ್ಮ ಉದ್ದೇಶ  ಈಡೇರುವುದು ಕಷ್ಟ. ಅನವಶ್ಯ ವಾಗ್ವಾದಕ್ಕೆ ಇಳಿಯದಿರಿ. ತಗಾದೆ ಇದ್ದರೆ ಸಂಧಾನದಿಂದ ಪರಿಹರಿಸಿಕೊಳ್ಳಿ.

ವೃಷಭ
ಸಾಧ್ಯವಾಗದು ಎಂದು ಭಾವಿಸಿದ ಕೆಲಸ ಸುಗಮವಾಗಿ ನಡೆಯಲಿದೆ. ಆತ್ಮವಿಶ್ವಾಸ ಹೆಚ್ಚಳ.  ಕೌಟುಂಬಿಕ ಪರಿಸರ ನಿಮಗೆ ಪೂರಕ.

ಮಿಥುನ
ಕೌಟುಂಬಿಕ  ವಿಷಯದಲ್ಲಿ ಹಠಮಾರಿ ಧೋರಣೆ ಬಿಡಿ. ಹೊಂದಿಕೊಂಡು ಹೋಗುವುದು ಮುಖ್ಯ.  ಕೆಲವರ ಮಾತಿಗೆ ಆಕ್ರೋಶ ತೋರದಿರಿ.

ಕಟಕ
ಮುಂಜಾನೆ ಅವಧಿ ಉದ್ವಿಗ್ನತೆ, ಅಸಹನೆ ಬಾಧಿಸಬಹುದು. ಆದರೆ ನಂತರ ಎಲ್ಲವೂ ಸರಿಯಾಗುವುದು. ನಿಮಗೆ ಪೂರಕ ಪರಿಸ್ಥಿತಿ ಮೂಡುವುದು.

ಸಿಂಹ
ಕೆಲಸದಲ್ಲಿ ನಿರುತ್ಸಾಹ. ಉದಾಸೀನತೆ. ನೀವು ಬಯಸಿದ್ದು ಆಗುತ್ತಿಲ್ಲವೆಂಬ ಬೇಸರ.  ಹೊಸ ಉತ್ಸಾಹದಿಂದ ಕಾರ್ಯ ಎಸಗುವುದೆ ಇದಕ್ಕೆ ಪರಿಹಾರ.

ಕನ್ಯಾ
ಏಕಾಗ್ರತೆ ಸಾಧಿಸಲು ಕಷ್ಟವಾಗುವುದು.  ಅದಕ್ಕೆ ಕಾರಣ ನಿಮ್ಮ ಮನಸ್ಸಿನಲ್ಲಿರುವ ನೂರಾರು ಚಿಂತೆಗಳು, ಒಳ ಬೇಗುದಿ ನಿಮ್ಮನ್ನು ಕಾಡುವುದು.

ತುಲಾ
ಮನಸ್ಸಿನಲ್ಲಿ ಉದಾಸ  ಭಾವ. ಕೆಲವರ ವರ್ತನೆಯಿಂದ ನೋವು. ಯಾರಲ್ಲೂ ಹೇಳಿಕೊಳ್ಳಲಾಗದ ಹತಾಶೆ. ದೇವರ ಧ್ಯಾನ ಮಾಡಿರಿ.

ವೃಶ್ಚಿಕ
ನಿಮ್ಮ ಅಸಹನೆ ಹೆಚ್ಚಿಸುವ ಬೆಳವಣಿಗೆ. ನೀವು ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲವೆಂಬ ಹತಾಶೆ.  ಮನಸ್ಸನ್ನು ಗಟ್ಟಿಗೊಳಿಸಿ ಮುನ್ನಡೆಯಿರಿ.

ಧನು
ನೆಮ್ಮದಿ ಹಾಳು ಮಾಡುವ ಪ್ರಸಂಗ ಸಂಭವಿಸೀತು.  ಆರ್ಥಿಕ ಸ್ಥಿತಿ ಚಿಂತೆಗೆ ಕಾರಣವಾಗುವುದು. ಕಠಿಣ ನಿರ್ಧಾರ ತಾಳಬೇಕಾಗುವುದು.

ಮಕರ
ಮನೆಯ ವಾತಾವರಣ ನಿಮಗೆ ಹಿತವೆನಿಸದು. ಕೆಲವು ಬೆಳವಣಿಗೆ ಅಸಂತೋಷ ಉಂಟು ಮಾಡುವುದು.  ಅದನ್ನು ವಿರೋಧಿಸಲು ಆಗದ ಪರಿಸ್ಥಿತಿ.

ಕುಂಭ
ಕೆಲವರ ವರ್ತನೆ ಕುರಿತಾಗಿಯೆ  ಯೋಚಿಸುತ್ತಾ ನಿಮ್ಮ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ.  ಅವರನ್ನು ಬದಲಿಸುವ ಪ್ರಯತ್ನ ಬಿಡಿರಿ.

ಮೀನ
ನೆಗೆಟಿವ್ ಚಿಂತನೆ ನಿಮ್ಮನ್ನು ಇಂದು ಬಾಧಿಸಬಹುದು. ನಿಮ್ಮ ಸುತ್ತಲಿನ ಬೆಳವಣಿಗೆ ಇದಕ್ಕೆ ಕಾರಣ. ಪರಿಸ್ಥಿತಿಯನ್ನು ನಿಮ್ಮ ಪರವಾಗಿ ಬದಲಿಸಲು ಪ್ರಯತ್ನ ಪಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!