ದಿನಭವಿಷ್ಯ| ಮಾಡಿದ ಕಾರ್ಯದಲ್ಲಿ ಇಂದು ಪೂರ್ಣ ಫಲ ನಿರೀಕ್ಷಿಸಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಸಾಂಸಾರಿಕ ವಿಚಾರಕ್ಕೆ  ಇಂದು ಹೆಚ್ಚು ಗಮನ ಕೊಡಬೇಕಾಗುವುದು. ಹಾಗೆಂದು ಇನ್ನಿತರ ಮಹತ್ವದ ವಿಷಯ ಕಡೆಗಣಿಸಬೇಡಿ. ಕರ್ತವ್ಯ ಮರೆಯದಿರಿ.

ವೃಷಭ
ಯಾವುದೋ ವಿಷಯಕ್ಕೆ ಮನೆಯಲ್ಲಿ ವಾಗ್ವಾದ ನಡೆದೀತು. ಸಣ್ಣ ವಿಷಯವನ್ನು ಅತಿರೇಕಕ್ಕೆ  ಕೊಂಡೊಯ್ಯಬೇಡಿ. ಸಂಧಾನದ ದಾರಿ ಉತ್ತಮ. ತಿಳಿದಿರಲಿ.

ಮಿಥುನ
ಏನು ಮಾಡಬೇಕೆಂದು ಯೋಚಿಸಿದ್ದೀರೋ ಅದನ್ನು ಮಾಡಿ. ಇತರರ ಮಾತು ಕೇಳಿ ಅದನ್ನು ಬದಲಿಸಬೇಡಿ.ಅಂತಿಮವಾಗಿ ನಿಮಗೆ ಒಳಿತೇ ಆಗುವುದು.

ಕಟಕ
ಇಂದು ನಿಮಗೆ ಪೂರಕ ಪರಿಸ್ಥಿತಿ. ವೃತ್ತಿಯಲ್ಲಿ, ಸಂಬಂಧದಲ್ಲಿ ಶುಭಪ್ರದ ಬೆಳವಣಿಗೆ.  ಆಪ್ತರಿಂದ ಅಚ್ಚರಿಯ ಸುದ್ದಿ ಕೇಳುವ ಸಂಭವ.ಬಂಧುಮಿತ್ರರ ಅನಿರೀಕ್ಷಿತ ಭೇಟಿ.

ಸಿಂಹ
ಕೌಟುಂಬಿಕ ಸಮಸ್ಯೆ ನೆಮ್ಮದಿ ಕೆಡಿಸುವುದು. ಯಾರಿಂದ ನೆರವು ನಿರೀಕ್ಷಿಸುವಿರೋ ಅವರು ನೆರವಿಗೆ ಬರುವುದಿಲ್ಲ. ಅಧ್ಯಾತ್ಮ, ದೇವರ ಕುರಿತು ಆಸಕ್ತಿ.

ಕನ್ಯಾ
ಬಾಕಿ ಉಳಿದಿರುವ ಕೆಲಸ ಮೊದಲು ಮುಗಿಸಿರಿ.ಅದನ್ನು ಹಾಗೇ ಬಿಡಬೇಡಿ. ಅಜೀರ್ಣದಂತಹ ಆರೋಗ್ಯ ಸಮಸ್ಯೆ ಕಾಡಬಹುದು.

ತುಲಾ
ಮಾಡಿದ ಕಾರ್ಯದಲ್ಲಿ ಇಂದು ಪೂರ್ಣ ಫಲ ನಿರೀಕ್ಷಿಸಬೇಡಿ. ಸ್ವಲ್ಪಮಟ್ಟಿನ ನಿರಾಶೆ ಉಂಟಾದೀತು. ಕೆಲವರ ಅಸಹಕಾರ, ಟೀಕೆ ಎದುರಿಸುವಿರಿ.

ವೃಶ್ಚಿಕ
ನೀವಿಂದು ಶಾಂತವಾಗಿ ಯೋಚಿಸಿ ಕಾರ್ಯ ಎಸಗಿರಿ. ದುಡುಕು, ರೋಷಾವೇಶ ಪ್ರತಿಕೂಲ ಪರಿಣಾಮ ಉಂಟು ಮಾಡೀತು.ಅನಿರೀಕ್ಷಿತ ಖರ್ಚು ಹೆಚ್ಚುವುದು.

ಧನು
ಮುಖ್ಯ ವಿಷಯದಲ್ಲಿ ದೃಢ ನಿರ್ಧಾರ  ತೆಗೆದುಕೊಳ್ಳಲು ಹಿಂಜರಿಯದಿರಿ. ಮೊದಲಿಗೆ  ಪ್ರತಿಕೂಲ ಎನಿಸಿದರೂ ಬಳಿಕ ಒಳಿತಾಗಲಿದೆ.

ಮಕರ
ವೃತ್ತಿಯಲ್ಲಿ ಹೆಚ್ಚಿನ ಹೊಣೆಗಾರಿಕೆ.ಅದರಿಂದ ತಪ್ಪಿಸಿಕೊಳ್ಳುವ ಯತ್ನ ಮಾಡದಿರಿ. ಕೆಲವು ಬೆಳವಣಿಗೆ ನಿಮಗೆ ಅತೃಪ್ತಿ ಮೂಡಿಸೀತು. ತಾಳ್ಮೆಯಿಂದ  ಕಾಯಿರಿ.

ಕುಂಭ
ನಿಮ್ಮ ಮನಸ್ಸು ಕೆಡಿಸುವ ಪ್ರಸಂಗ ಉಂಟಾದೀತು.  ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ. ಹಿತವಲ್ಲದ ಆಹಾರದಿಂದ ಹೊಟ್ಟೆ ಕೆಡಬಹುದು.

ಮೀನ
ಉದ್ಯೋಗದಲ್ಲಿ ಹೆಚ್ಚು ಜವಾಬ್ದಾರಿ. ಬಾಕಿ ಇರುವ ಕಾರ್ಯ ಮುಗಿಸಿ.ಇಲ್ಲವಾದರೆ ಒತ್ತಡ ಹೆಚ್ಚು. ಆಪ್ತರ ಭಾವನಾತ್ಮಕ ಬೇಡಿಕೆಗೆ ಸ್ಪಂದಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!