ದಿನಭವಿಷ್ಯ | ಶನಿವಾರದ ರಾಶಿಭವಿಷ್ಯ ಹೀಗಿದೆ..

ಮೇಷ
ಕೌಟುಂಬಿಕ ಪರಿಸರದಲ್ಲಿ ಕೆಲವು ಬದಲಾವಣೆ ಆಗಬಹುದು. ಅದು ನಿಮಗೆ ಅಸಮಾಧಾನ ಸೃಷ್ಟಿಸಬಹುದು. ವಿರೋಸುವುದಕ್ಕಿಂತ ಹೊಂದಾಣಿಕೆ ಒಳಿತು.

ವೃಷಭ
ಮನೆಯ ಕೆಲಸದಲ್ಲಿ ಹೆಚ್ಚು ಹೊಣೆಗಾರಿಕೆ ವಹಿಸಬೇಕು. ನಿಮ್ಮ ಜವಾಬ್ದಾರಿ ನಿಭಾಯಿಸಲು ಅಲಕ್ಷ್ಯ ತೋರದಿರಿ. ಆರ್ಥಿಕ ಒತ್ತಡ ಕಾಡಬಹುದು.

ಮಿಥುನ
ವೃತ್ತಿಯಲ್ಲಿ ನಿಮಗೆ ಪೂರಕವಲ್ಲದ ಬೆಳವಣಿಗೆ. ಸಹೋದ್ಯೋಗಿಗಳ ಅಸಹಕಾರ. ಖರೀದಿಯ ಉತ್ಸಾಹ ನಿಯಂತ್ರಿಸಿ, ಅಧಿಕ ಖರ್ಚು ಸಂಭವ.

ಕಟಕ
ಭಾವನಾತ್ಮಕ ವಿಚಾರವೊಂದು ನಿಮ್ಮ ಮನಸ್ಸು ಕಲಕುವುದು. ಅದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ತೋಚದೆ ಗೊಂದಲ ಅನುಭವಿಸುವಿರಿ.

ಸಿಂಹ
ಆಪ್ತೇಷ್ಟರ ವರ್ತನೆಯು ನಿಮಗೆ ಅಸಂತೋಷ ತರಲಿದೆ. ಅವರೊಂದಿಗೆ ವಾಗ್ವಾದ ನಡೆದೀತು. ಜಗಳವನ್ನು ಉಲ್ಬಣಗೊಳಿಸದಿರಿ. ಸಹನೆ ಅತಿ ಮುಖ್ಯ.

ಕನ್ಯಾ
ವೃತ್ತಿಯಲ್ಲಿ  ಮಾತಿನ ಸಂಘರ್ಷ ನಡೆಯಬಹುದು. ನಿಮ್ಮ ಏಕಾಗ್ರತೆ ಹಾಳಾದೀತು. ಮೇಲಧಿಕಾರಿಗಳ ಅಸಮಾಧಾನಕ್ಕೆ ತುತ್ತಾಗುವಿರಿ.

ತುಲಾ
ಕೌಟುಂಬಿಕ ಸಮಸ್ಯೆ ಪರಿಹಾರ. ವೈಷಮ್ಯ ನಿವಾರಣೆ ಹಾಗೂ ಸೌಹಾರ್ದ ನೆಲೆಸುವುದು. ಮಕ್ಕಳ ಸಾಧನೆಯಿಂದ ಸಂತೋಷ.

ವೃಶ್ಚಿಕ
ಇಂದು ಹಿತಕರ ಸುದ್ದಿ ಕೇಳುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು.

ಧನು
ಕುಟುಂಬ ಸದಸ್ಯರ ಬೇಕುಬೇಡಗಳಿಗೆ ಗಮನ ಕೊಡಿರಿ. ವೃತ್ತಿಯ ಒತ್ತಡದಲ್ಲಿ ಕೌಟುಂಬಿಕ ಹಿತಾಸಕ್ತಿ ಕಡೆಗಣಿಸಬೇಡಿ. ಆರೋಗ್ಯ  ಸುಧಾರಣೆ.

ಮಕರ
ಸಣ್ಣದೊಂದು ವಿಷಯವು ಮನಸ್ಸಿನ ಶಾಂತಿ ಕದಡಬಹುದು. ಅದರ ಪರಿಹಾರಕ್ಕೆ ದಾರಿಗಳಿದ್ದರೂ ನೀವು ಸುಮ್ಮಗೆ ಕೂತಿದ್ದೀರಿ. ಜಡತೆ ಬಿಟ್ಟೇಳಿ.

ಕುಂಭ
ವೈಯಕ್ತಿಕ ಬದುಕಿನಲ್ಲಿ ದಿಟ್ಟ ನಿರ್ಧಾರ ತಾಳಬೇಕಾದ ಅಗತ್ಯವಿದೆ. ಅದರಿಂದಲೇ ನಿಮಗೆ ಒಳಿತಾಗುವುದು. ಹಿಂಜರಿಕೆ ಬೇಡ.

ಮೀನ
ಆಪ್ತರೊಬ್ಬರ ನಡೆನುಡಿ ನಿಮ್ಮ ಮನಸ್ಸು ನೋಯಿಸಬಹುದು. ಅದನ್ನು ನುಂಗಿ ಕೂರದಿರಿ. ನಿಮ್ಮ ಭಾವನೆ ಹೊರಹಾಕಿ ಮನಸ್ಸು ಹಗುರಾಗಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!