ದಿನಭವಿಷ್ಯ | ಈ ರಾಶಿಯವರು ವದಂತಿಗಳನ್ನು ನಂಬಿ ಶಾಂತಿ ಹಾಳುಮಾಡಿಕೊಳ್ಳಬೇಡಿ

ಮೇಷ
ನೀವಿಂದು ಕೈಗೊಳ್ಳುವ ಕಾರ್ಯದಲ್ಲಿ ಸಫಲತೆ. ಪ್ರತಿಕೂಲ ಪರಿಸ್ಥಿತಿಯೂ ನಿಮಗೆ ಪೂರಕವಾಗಿ ಬದಲಾಗುವುದು. ಆಪ್ತರಿಂದ ಸೂಕ್ತ ಸಹಕಾರ, ಬೆಂಬಲ.

ವೃಷಭ
ನಿಮ್ಮ ಸುತ್ತಲಿನ ಬದಲಾವಣೆಗೆ ಕುರುಡರಾಗಬೇಡಿ. ಏಕೆಂದರೆ ಅದು ನಿಮ್ಮ ಬದುಕಿನ ಮೇಲೂ ಪರಿಣಾಮ ಬೀರಬಹುದು.

ಮಿಥುನ
ಹೆಚ್ಚು ಒತ್ತಡದ ದಿನ. ಕಾರ್ಯಗಳು ನೀವು ಬಯಸಿದಂತೆ ಸಾಗುವುದಿಲ್ಲ. ಅಡ್ಡಿಗಳು ಬಾಧಿಸುತ್ತವೆ. ಚಾಡಿ ಮಾತು ಕೇಳಿ ಆಪ್ತರನ್ನು ದೂರ ಮಾಡದಿರಿ.

ಕಟಕ
ಆತ್ಮೀಯ ಸಂಬಂಧದಲ್ಲಿ ಬಿರುಕು ಮೂಡೀತು. ಇತರರನ್ನೇ ಅದಕ್ಕೆ ದೂರಬೇಡಿ. ನಿಮ್ಮ ಸ್ವಭಾವ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ.

ಸಿಂಹ
ನೀವೆಸಗುವ ಕೆಲಸದಲ್ಲಿ ತಪ್ಪು ಸಂಭವಿಸಬಹುದು. ಸಕಾಲದಲ್ಲಿ ಅದನ್ನು ಸರಿಪಡಿಸಿ. ಬೇಕಾಬಿಟ್ಟಿ ಧೋರಣೆ ತಾಳದಿರಿ. ಬಂಧುಗಳಿಂದ ಕಿರಿಕಿರಿ ಅನುಭವಿಸುವಿರಿ.

ಕನ್ಯಾ
ನಿಮ್ಮ ಬೆನ್ನಹಿಂದೆ ಏನೋ ನಡೆಯುತ್ತಿದೆ ಎಂಬ ಭಾವ ಕಾಡಬಹುದು. ನಿಮಗೆ ಆಗದವರು ನಿಮ್ಮ ವಿರುದ್ಧ ಮಸಲತ್ತು ನಡೆಸಬಹುದು. ಎಚ್ಚರದಿಂದಿರಿ.

ತುಲಾ
ವೃತ್ತಿ ಮತ್ತು ಮನೆಯಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಇತರರ ಕಾರ್ಯವೂ ನಿಮ್ಮ ಹೆಗಲೇರುವುದು. ಆಪ್ತರೊಬ್ಬರು ನಿಮ್ಮ ನೋವಿಗೆ ಶಮನವಾಗಿ ಬರುತ್ತಾರೆ.

ವೃಶ್ಚಿಕ
ವೃತ್ತಿ ಕ್ಷೇತ್ರದಲ್ಲಿ ಅತೃಪ್ತಿ.ಮಾಡಿದ ಕಾರ್ಯವು ನಿರೀಕ್ಷಿತ ಫಲ ನೀಡದು. ಹಣಕ್ಕೆ ಸಂಬಂಧಿಸಿ ಕೆಲವು ಒತ್ತಡಗಳು ಬಾಧಿಸುತ್ತವೆ. ಕೌಟುಂಬಿಕ ಉದ್ವಿಗ್ನತೆ ಉಂಟಾಗುವುದು.

ಧನು
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ನಿಭಾಯಿಸುವಲ್ಲಿ  ಸಫಲರಾಗುವಿರಿ. ನೆಗೆಟಿವ್ ಚಿಂತನೆಗಳು ಮನಸ್ಸನ್ನು ಕಾಡದಂತೆ ನೋಡಿಕೊಳ್ಳಿ.

ಮಕರ
ನಿಮ್ಮ  ಕ್ಷೇತ್ರದಲ್ಲಿ ಉತ್ತಮ ಅವಕಾಶ ದೊರಕಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಆರ್ಥಿಕವಾಗಿ ಲಾಭ. ಕೌಟುಂಬಿಕ ನೆಮ್ಮದಿ.

ಕುಂಭ
ನಂಬಿಕಸ್ಥರ ಮಾತನ್ನು ಮಾತ್ರ ನಂಬಿರಿ. ವದಂತಿಗಳನ್ನು ನಂಬಿ ನಿಮ್ಮ ಕುಟುಂಬದ ಶಾಂತಿ ಹಾಳು ಮಾಡಿಕೊಳ್ಳದಿರಿ. ಆರ್ಥಿಕ ಒತ್ತಡ.

ಮೀನ
ಲೌಕಿಕ ಜಗತ್ತಿನಲ್ಲಿ ಭಾವನೆಗಳಿಗೆ ಬೆಲೆಯಿಲ್ಲ ಎಂಬಂತಹ ಅನಿಸಿಕೆ ಮೂಡೀತು. ಅತಿಯಾದ ಭಾವುಕತೆ ಒಳಿತಲ್ಲ  ಎಂಬ ಅರಿವು ನಿಮಗಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!