ಯಾರೋ ಕಿಡಿಗೇಡಿಗಳು ಕಲ್ಲು ಎಸೆದ್ರೆ ‘ಕೋಮು ಗಲಭೆ’ ಹೇಗಾಯ್ತು? : ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಭೆ ಕೋಮುಗಲಭೆ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕುರುಬ ಸಮಾವೇಶದಲ್ಲಿ ಸಿಎಂ ಪಾಲ್ಗೊಂಡಿದ್ದು, ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದಿದ್ದು ಕೋಮು ಗಲಭೆ ಅಲ್ಲ, ಗಲಾಟೆಗೆ ಕೋಮು ಗಲಭೆ ಹೆಸರು ಕೊಡಬೇಡಿ. ಯಾರೋ ನಾಲ್ಕು ಜನ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅವರನ್ನು ಜೈಲಿಗಟ್ಟಿದ್ದು ಆಗಿದೆ. ಕೋಮು ಗಲಭೆಗೆ ಸರ್ಕಾರ ಪ್ರಚೋದನೆ ಕೊಟ್ಟಿದ ಎಂದು ಬಿಜೆಪಿ ಹೇಳ್ತಿದೆ. ಇದೆಲ್ಲಾ ರಾಜಕೀಯ, ಅವರಿಗೆ ಆರೋಪ ಮಾಡೋದು ಬಿಟ್ಟು ಇನ್ನೇನು ಗೊತ್ತು? ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!