ಭಾರತದಲ್ಲಿ ಜಲಮಾರ್ಗ ಕ್ರಾಂತಿ ತೆರೆದುಕೊಳ್ತಿರೋದು ಹೇಗೆ? ವಿವರಿಸಿದ್ದಾರೆ ಸರ್ಬಾನಂದ ಸೋನೊವಾಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಆರ್ಥಿಕತೆಯ ಬೆಳವಣಿಗೆಗೆ ಶಕ್ತಿ ತುಂಬುವ ಒಳನಾಡು ಜಲಮಾರ್ಗಳ ಅಭಿವೃದ್ಧಿಗಾಗಿ ಸರ್ಕಾರವು 2014 ರಿಂದೀಚೆಗೆ ರೂ. 5,200 ಕೋಟಿಗೂ ಅಧಿಕ ಹೂಡಿಕೆಯನ್ನು ಮಾಡಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳು ಹಾಗೂ ಆಯುಷ್ ಖಾತೆ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಹೇಳಿದರು.

ಆಗಸ್ಟ್ 31 ರಂದು ಗುವಾಹಟಿಯಲ್ಲಿ ನಡೆದ ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ 2023ರ ರೋಡ್‍ಶೋವನ್ನು ಸಚಿವರು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ಒಳನಾಡಿನ ಜಲಮಾರ್ಗಗಳ ಪಾತ್ರವು ಪರ್ಯಾಯ ಸಾರಿಗೆ ವಿಧಾನವಾಗಿ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹೇಗೆ ವಿಕಸನಗೊಂಡಿದೆ ಎಂಬುದನ್ನು ಎತ್ತಿ ಹಿಡಿದರು.

ಒಳನಾಡಿನ ಜಲಮಾರ್ಗಗಳು ಭಾರತದ ಆರ್ಥಿಕತೆಯ ಬೆಳವಣಿಗೆಗೆ ಶಕ್ತಿ ತುಂಬುತ್ತಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಒಳನಾಡು ಜಲಮಾರ್ಗ ಕ್ಷೇತ್ರವು ಸರ್ಕಾರದಂತೆ ಮಹತ್ತರವಾದ ಉತ್ತೇಜನವನ್ನು ಪಡೆದುಕೊಂಡಿದೆ. ಸರಕಾರವು 2014 ರಿಂದೀಚೆಗೆ ರೂ. 5200 ಕೋಟಿ ಹೂಡಿಕೆ ಮಾಡಿದೆ. ಇದು ಹಿಂದಿನ 28 ವರ್ಷಗಳಲ್ಲಿ ಮಾಡಿದ ಹೂಡಿಕೆಗಿಂತ 9 ವರ್ಷಗಳ ಅವಧಿಯಲ್ಲಿ ಸರ್ಕಾರ ಮಾಡಿದ ಹೂಡಿಕೆಯ ಮೊತ್ತದಲ್ಲಿ 200% ಕ್ಕಿಂತ ಹೆಚ್ಚು ಗಮನಾರ್ಹ ಏರಿಕೆಯಾಗಿದೆ ಎಂದರು.

ಮೋದಿ ಸರ್ಕಾರದ ಅವಧಿಯಲ್ಲಿ ಒಳನಾಡು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಅತ್ಯಂತ ಮಹತ್ವದ ಯೋಜನೆ ಎನಿಸಿದೆ. ಭಾರತದ ಒಳನಾಡಿನ ಆರ್ಥಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಆರ್ಥಿಕ ಸಾರಿಗೆ ವಿಧಾನವು ಪ್ರಮುಖವಾಗಿರುತ್ತದೆ. ಒಳನಾಡಿನ ಜಲಮಾರ್ಗಗಳಲ್ಲಿ ಹೂಡಿಕೆ ಮಾಡುವ ಮೂಲಕ ನಮ್ಮ ಶ್ರೀಮಂತ ಹಾಗೂ ಸಂಕೀರ್ಣ ಜಲಮಾರ್ಗ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಮೂಲಕ ನಾವು ಉದ್ಯಮಕ್ಕಾಗಿ ಉತ್ತಮ ಪರಿಸರ ವ್ಯವಸ್ಥೆಯನ್ನು ರಚಿಸುವ ಪ್ರಕ್ರಿಯೆಯಲ್ಲಿದ್ದೇವೆ. ಇದು ನಮ್ಮ ನೆರೆಯ ದೇಶಗಳ ನಡುವೆ ಸಹಕಾರವನ್ನು ಉತ್ತೇಜಿಸುತ್ತದೆ ಎಂದು ಬಣ್ಣಿಸಿದರು.

ಬಂದರು ನೇತೃತ್ವದ ಅಭಿವೃದ್ಧಿಯ ಪಾತ್ರವನ್ನು ಎತ್ತಿ ಹಿಡಿದ ಸರ್ಬಾನಂದ ಸೋನೊವಾಲ್, “ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದ ಸರ್ಕಾರ, ಭಾರತೀಯ ಬಂದರುಗಳನ್ನು ಜಾಗತಿಕ ಗುಣಮಟ್ಟಕ್ಕೆ ತರುವ ಗುರಿಯನ್ನು ಹೊಂದಿದೆ. ಹೆಚ್ಚಿನ ಕೈಗಾರಿಕೀಕರಣ, ಉತ್ಪಾದನೆ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಇದು ಅನುಕೂಲವಾಗುತ್ತದೆ. ಭಾರತವು ವೇಗವಾಗಿ ವಿಸ್ತರಿಸುತ್ತಿರುವ ಕಡಲ ರಾಷ್ಟ್ರಗಳಲ್ಲಿ ಒಂದಾಗಿದೆ. ನಮ್ಮ ಬಂದರುಗಳನ್ನು ಆಧುನೀಕರಿಸುವ ಮೂಲಕ ಭಾರತವು ಕರಾವಳಿ ಸಮುದಾಯಗಳು, ಕರಾವಳಿ ಜಿಲ್ಲೆಗಳು ಮತ್ತು ಇಡೀ ರಾಷ್ಟ್ರದ ಪ್ರಗತಿಯನ್ನು ಖಚಿತಪಡಿಸುತ್ತದೆ ಎಂದು ವಿವರಿಸಿದರು.

ಗಮನಾರ್ಹ ಯೋಜನೆಗಳಲ್ಲಿ ಜಲಮಾರ್ಗ್ ವಿಕಾಸ್ ಮತ್ತು ಅರ್ಥ ಗಂಗಾ ಯೋಜನೆಗಳು ರೂ. 4,634 ಕೋಟಿಗಳ ದೊಡ್ಡ ಮಟ್ಟದ ಯೋಜನೆಗಳಾಗಿವೆ. ಇದಲ್ಲದೆ ಬ್ರಹ್ಮಪುತ್ರ ನದಿಯು (ಎನ್‍ಡಬ್ಲ್ಯು-2) 2020-21 ರಲ್ಲಿ ಅದರ ಅಭಿವೃದ್ಧಿಗಾಗಿ ರೂ. 474 ಕೋಟಿಗಳ ಅನುದಾನ ಪಡೆದಿದೆ. ಪಾಂಡುವಿನಲ್ಲಿ ಹಡಗು ದುರಸ್ತಿ ಸೌಲಭ್ಯಕ್ಕಾಗಿ ರೂ. 208 ಕೋಟಿ ಅನುದಾನ ಪಡೆದಿದೆ. ಈ ನಿಧಿಯು ಹೊಸ ರಾಷ್ಟ್ರೀಯ ಜಲಮಾರ್ಗಗಳಾದ ಬರಾಕ್ ನದಿ (ಎನ್‍ಡಬ್ಲ್ಯು-16) ಮತ್ತು ಇಂಡೋ-ಬಾಂಗ್ಲಾದೇಶ ಪ್ರೋಟೋಕಾಲ್ ಮಾರ್ಗವನ್ನು ರೂ. 148 ಕೋಟಿಗಳಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದೆ ಮತ್ತು ಎನ್‍ಡಬ್ಲ್ಯು-3, ಎನ್‍ಡಬ್ಲ್ಯು-4, ಎನ್‍ಡಬ್ಲ್ಯು-5 ಗಾಗಿ ಮತ್ತು 13 ಇತರ ಹೊಸ ರಾಷ್ಟ್ರೀಯ ಜಲಮಾರ್ಗಗಳಿಗಾಗಿ ಒಟ್ಟು ರೂ. 267 ಕೋಟಿಗಳನ್ನು ನಿಗದಿಪಡಿಸಲಾಗಿದೆ. ಈ ಹೆಚ್ಚಿದ ನಿಧಿಯು ರಾಷ್ಟ್ರೀಯ ಜಲಮಾರ್ಗಗಳ ಸಮಗ್ರ ಅಭಿವೃದ್ಧಿಗೆ ಸಹಕರಿಸಲಿದೆ ಎಂದು ಹೇಳಿದರು.

ಸಾಗರ ಉದ್ಯಮದಲ್ಲಿ ಅವಕಾಶಗಳನ್ನು ಅನ್ವೇಷಿಸಲು ಮಹಿಳಾ ಉದ್ಯಮಿಗಳಿಗೆ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರು ಕರೆ ನೀಡಿದರು.

ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ 2023ರ ಮುಖ್ಯ ಕಾರ್ಯಕ್ರಮದ ಭಾಗವಾಗಿ ಸಚಿವಾಲಯವು ಗುವಾಹಟಿಯಲ್ಲಿ ರೋಡ್‍ಶೋ ಆಯೋಜಿಸಲಾಗಿತ್ತು. ಎಲ್ಲ ಈಶಾನ್ಯ ರಾಜ್ಯಗಳ ಪ್ರತಿನಿಧಿಗಳು ಹಾಗೂ ಬಾಂಗ್ಲಾದೇಶ ಸರ್ಕಾರ ಮತ್ತು ಭೂತಾನ್‍ನ ರಾಯಲ್ ಸರ್ಕಾರದ ಪ್ರತಿನಿಧಿಗಳು ರೋಡ್‍ಶೋನಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!