April 27, 2026
Monday, April 27, 2026
spot_img

ಮಾಟ-ಮಂತ್ರಕ್ಕೆ ಒಪ್ಪದ ಪತ್ನಿಯ ಮೇಲೆ ಕುದಿಯುವ ಮೀನಿನ ಸಾರು ಸುರಿದ ಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಒಂದು ಘಟನೆಯು ಅಂಧನಂಬಿಕೆಯ ಭೀಕರ ರೂಪವನ್ನು ಮತ್ತೆ ಹೊರತಂದಿದೆ. ಮಾಟಮಂತ್ರದಲ್ಲಿ ಭಾಗವಹಿಸಲು ನಿರಾಕರಿಸಿದ ಪತ್ನಿಯ ಮೇಲೆ ಕುದಿಯುವ ಮೀನಿನ ಸಾರು ಸುರಿದಿರುವ ಘಟನೆ ಅಚ್ಚರಿ ಮೂಡಿಸಿದೆ.

ಸಜೀರ್‌ ಎನ್ನುವ ವ್ಯಕ್ತಿ ಅಂಚಲ್‌ನಲ್ಲಿರುವ ಮಾಟಮಂತ್ರ ಮಾಡುವ ವ್ಯಕ್ತಿಯೊಬ್ಬನನ್ನು ಭೇಟಿ ಮಾಡಿ ಭಸ್ಮ ಮತ್ತು ತಾಯಿತವನ್ನು ಮನೆಗೆ ತಂದಿದ್ದ. ಬಳಿಕ ತನ್ನ ಪತ್ನಿ ರೆಜಿಲಾಳಿಗೆ ಕೂದಲನ್ನು ಬಿಚ್ಚಿ ತನ್ನ ಮುಂದೆ ಕುಳಿತುಕೊಳ್ಳುವಂತೆ ಹೇಳಿದ. ಆದರೆ ಪತ್ನಿ ಮಾಟಮಂತ್ರ ಆಚರಣೆಗೆ ನಿರಾಕರಿಸಿದಾಗ, ಕೋಪದಿಂದ ಅಡುಗೆಮನೆಯಲ್ಲಿ ಬೇಯುತ್ತಿದ್ದ ಕುದಿಯುವ ಮೀನಿನ ಸಾರವನ್ನು ಆಕೆಯ ಮುಖ ಮತ್ತು ಕುತ್ತಿಗೆಗೆ ಸುರಿದಿದ್ದಾನೆ.

ಘಟನೆಯ ವೇಳೆ ಆಕೆಯ ಚೀರಾಟ ಕೇಳಿ ನೆರೆಹೊರೆಯವರು ಓಡಿಬಂದು ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಕೆ ಅಂಚಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿ ಸಜೀರ್‌ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆತ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸಜೀರ್‌ ಹಿಂದೆಂದೂ ತನ್ನ ಪತ್ನಿಗೆ “ದೆವ್ವ ಹಿಡಿದಿದೆ” ಎಂದು ಹೇಳಿ ಹಲವು ಬಾರಿ ಹಲ್ಲೆ ನಡೆಸಿದ್ದ. ಆ ಸಮಯದಲ್ಲಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದರೂ, ಕೇವಲ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿತ್ತು. ಈ ಬಳಿಕವೂ ಆತ ಮಾಟಮಂತ್ರದ ನಂಬಿಕೆಯಿಂದ ‘ಉಸ್ತಾದ್‌’ ಎನ್ನುವ ವ್ಯಕ್ತಿಯನ್ನು ಭೇಟಿಯಾಗುತ್ತಲೇ ಇದ್ದಾನೆ ಎಂದು ಪತ್ನಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !