June 25, 2026
Thursday, June 25, 2026
spot_img

ಅಂತ್ಯಕ್ರಿಯೆ ಸ್ಥಳದಲ್ಲಿ ಹೈಡ್ರಾಮಾ: ಕಣ್ಣೀರಿಡುತ್ತಾ ಬಂದ ನಟಿ ಕೃಷಿ ತಾಪಂಡಗೆ ಶಾಕ್ ನೀಡಿದ ವೈಶಾಕ್ ಕುಟುಂಬಸ್ಥರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉದ್ಯಮಿ ಮತ್ತು ನಟಿಯ ಆಪ್ತ ಗೆಳೆಯ ವೈಶಾಕ್ ಗೌಡ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಹೈಡ್ರಾಮಾವೊಂದು ನಡೆದಿದೆ. ಗೆಳೆಯನ ಅಗಲಿಕೆಯ ದುಃಖ ತಡೆಯಲಾರದೆ ಕಣ್ಣೀರಿಡುತ್ತಾ ಓಡಿಬಂದ ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡರನ್ನು ಮೃತರ ಕುಟುಂಬದವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

 ಕಣ್ಣೀರಿಡುತ್ತಾ ಓಡಿಬಂದ ನಟಿಗೆ ‘ನೋ ಎಂಟ್ರಿ’!

ವೈಶಾಕ್ ಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಮತ್ತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನಟಿ ಕೃಷಿ ತಾಪಂಡ ಸ್ಥಳಕ್ಕೆ ಆಗಮಿಸಿದ್ದರು. ಗೆಳೆಯನ ಮುಖ ನೋಡಿ ಅವರು ಕಣ್ಣೀರಿಡುತ್ತಾ ಮುಂದೆ ಹೋಗಲು ಯತ್ನಿಸಿದಾಗ, ವೈಶಾಕ್ ಕುಟುಂಬಸ್ಥರು ಮತ್ತು ಆಪ್ತರು ನಟಿಯನ್ನು ತಡೆದಿದ್ದಾರೆ. ಅಲ್ಲದೆ, ಸ್ಥಳದಲ್ಲೇ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವೇನು?

ವೈಶಾಕ್ ಸಾವಿಗೆ ಮತ್ತು ಅವರ ಜೀವನದಲ್ಲಿ ಎದುರಾಗಿದ್ದ ಮಾನಸಿಕ ನೆಮ್ಮದಿಯ ಕೊರತೆಗೆ ನಟಿಯೊಂದಿಗಿನ ಒಡನಾಟವೇ ಕಾರಣ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ ಎನ್ನಲಾಗಿದೆ. “ಇಲ್ಲಿಗೆ ಯಾಕೆ ಬಂದಿದ್ದೀರಾ? ಸಾಕು ಮಾಡಿ ನಿಮ್ಮ ನಾಟಕ, ತಕ್ಷಣ ಇಲ್ಲಿಂದ ಹೊರಟುಹೋಗಿ” ಎಂದು ಕುಟುಂಬದ ಮಹಿಳೆಯರು ಕೃಷಿ ತಾಪಂಡ ವಿರುದ್ಧ ತಿರುಗಿಬಿದ್ದರು.

ಮೌನವಾಗಿ ಸ್ಥಳದಿಂದ ನಿರ್ಗಮಿಸಿದ ಕೃಷಿ

ಕುಟುಂಬಸ್ಥರು ಹಾಗೂ ಅಲ್ಲಿದ್ದ ಆಪ್ತರು ನಟಿಯ ವಿರುದ್ಧ ಜೋರಾಗಿ ಕೂಗಾಡಲು ಆರಂಭಿಸುತ್ತಿದ್ದಂತೆ ಸ್ಥಳದಲ್ಲಿ ಮುಜುಗರದ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ನಟಿ ಕೃಷಿ ತಾಪಂಡ ಅವರು ಯಾವುದೇ ಪ್ರತಿಕ್ರಿಯೆ ನೀಡದೆ, ಕಣ್ಣೀರು ಒರೆಸಿಕೊಳ್ಳುತ್ತಾ ಮೌನವಾಗಿ ಅಂತ್ಯಕ್ರಿಯೆಯ ಸ್ಥಳದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !