ಅಡ್ಜೆಸ್ಟ್ ಮೆಂಟ್ ರಾಜಕಾರಣಿ ನಾನಲ್ಲ: ಎ.ನಾರಾಯಣಸ್ವಾಮಿ

ಹೊಸದಿಗಂತ ವರದಿ, ಚಿತ್ರದುರ್ಗ : 
ಬಿಜೆಪಿ ಪಕ್ಷ ಕಟ್ಟುವ ತಳಹದಿಯಲ್ಲಿ ನಾರಾಯಣಸ್ವಾಮಿಯ ಬೆವರಿನ ಹನಿ ಇದೆ. ಟಿಕೆಟ್ ಸಿಗದಿದ್ದ ಮಾತ್ರಕ್ಕೆ ಪಕ್ಷಾಂತರ ಮಾಡುವುದು, ಓಲೈಕೆ ರಾಜಕಾರಣ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದಲ್ಲಿ ಬುಧವಾರ ಟಿಕೆಟ್ ತಪ್ಪಿದರೆ ಕಾಂಗ್ರೆಸ್ ಗೆ ಹೋಗುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಯಿಂದ ಕೆರಳಿದ ಅವರು, ನಾರಾಯಣಸ್ವಾಮಿ ಅಡ್ಜೆಸ್ಟ್ ಮೆಂಟ್ ರಾಜಕಾರಣಿಯಲ್ಲ. ದೇಶದ, ರಾಜ್ಯದ ಯಾವುದೇ ಮಾಧ್ಯಮಗಳು ಇಂತಹ ಪ್ರಶ್ನೆಯನ್ನು ಕೇಳಬಾರದು ಎಂದು ಕಿಡಿಕಾರಿದರು.

ಪ್ರಧಾನಿ ಸೇರಿದಂತೆ ಪಾರ್ಲಿಮೆಂಟ್ ಕಮಿಟಿ ಇದೆ. ಅದು ಯಾರಿಗೆ ಟಿಕೆಟ್ ನೀಡಬೇಕೆಂದು ನಿರ್ಧರಿಸುತ್ತದೆ. ಈಗಾಗಲೇ  ೧೯೫ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದರು.

ಟಿಕೆಟ್ ಹಾಗೂ ಅಭ್ಯರ್ಥಿ ಘೋಷಣೆಯನ್ನು ಪ್ರತಿ ಆಕಾಂಕ್ಷಿ, ಸಚಿವರು, ಸಂಸದರು, ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದಾರೆ. ಅಭ್ಯರ್ಥಿಗಳ ಘೋಷಣೆ ನಂತರ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!