ನಾನು ಹೋಮ-ಹವನದಲ್ಲಿ ಕೂರುವುದಿಲ್ಲ ಆದ್ರೆ… ದೇಗುಲ ಭೇಟಿ ನೀಡಿದ್ದರ ಹಿಂದಿನ ಕಾರಣ ತಿಳಿಸಿದ ನಟ ಪ್ರಕಾಶ್ ರೈ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರು ನಟನೆ ಎಂದರೆ ಎಲ್ಲರಿಗು ಅಚ್ಚುಮೆಚ್ಚು. ಆದ್ರೆ ಅವರ ವೈಯಕ್ತಿಕ ಜೀವನ, ಸಿದ್ಧಾಂತಗಳ ಕುರಿತು ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನಾನಾ ವಿಚಾರಗಳ ಕುರಿತು ಹೇಳಿಕೆ ನೀಡುವ ಮೂಲಕ ಅವರು ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ.

ಇದೀಗ ಇತ್ತೀಚೆಗೆ ಅವರು ಕುಟುಂಬದ ಜೊತೆ ಕೊಲ್ಲೂರಿಗೆ ತೆರಳಿ ಚಂಡಿಕಾ ಹೋಮದಲ್ಲಿ ಭಾಗಿ ಆಗಿದ್ದರು. ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಕುರಿತು ಅನೇಕರು ಟೀಕೆ ಮಾಡಿದ್ದರು.ಅದಕ್ಕೆ ಕಾರಣ ಪ್ರಕಾಶ್ ರೈ ಅವರು ಎಡಪಂಥೀಯ ಸಿದ್ದಾಂತಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರು ಹೋಮ-ಹವನದಲ್ಲಿ ನಂಬಿಕೆ ಇಲ್ಲದವರು.

ಇದೀಗಈ ವಿಚಾರದಲ್ಲಿ ಪ್ರಕಾಶ್ ರೈ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನಾನು ಪತ್ನಿಗೆ ಗೌರವ ನೀಡಿ ತಾವು ಹೋಮದಲ್ಲಿ ಭಾಗಿ ಆಗಿದ್ದಾಗಿ ಅವರು ಹೇಳಿದ್ದಾರೆ. ‘ನಾನು ಹೋಮ-ಹವನದಲ್ಲಿ ಕೂರುವುದಿಲ್ಲ ಎಂಬುದು ಬೇರೆ ವಿಚಾರ. ಆದರೆ, ನನ್ನ ಪತ್ನಿ ಒಪ್ಪಿದ್ದನ್ನು ನಾನು ಗೌರವಿಸಬೇಕು. ಹೀಗಾಗಿ ನಾವು ಪೂಜೆ ಮಾಡಿಸಿದ್ದೇವೆ. ನಾನು ನನ್ನ ಪತ್ನಿಯನ್ನು ಗೌರವಿಸುತ್ತೇನೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!