‘ಆಪರೇಷನ್ ಸಿಂಧೂರ’ ಹೊಡೆತಕ್ಕೆ ಪಾಕಿಸ್ತಾನ ನಾಯಕರ ತಲೆ ಯಾಕೋ ಕೆಲ್ಸ ಮಾಡ್ತಿಲ್ಲ ಅನ್ಸುತ್ತೆ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್, ‘ಆಪರೇಷನ್ ಸಿಂಧೂರ’ ಸಮಯದಲ್ಲಿ ರಫೇಲ್ ಸೇರಿದಂತೆ ಐದು ಭಾರತೀಯ ಜೆಟ್‌ಗಳನ್ನು ತನ್ನ ಪಡೆಗಳು ಹೊಡೆದುರುಳಿಸಿದವು ಎಂಬ ತಮ್ಮ ದೇಶದ ಹೇಳಿಕೆಗೆ ಸಾಮಾಜಿಕ ಮಾಧ್ಯಮ ವರದಿಗಳು ಕಾರಣ ಎಂದು ಉತ್ತರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಪತ್ರಕರ್ತರೊಬ್ಬರು ಪಾಕಿಸ್ತಾನ ತನ್ನ ಹೇಳಿಕೆಯನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ಹೊಂದಿದೆಯೇ ಎಂದು ಕೇಳಿದಾಗ ಆಸಿಫ್ ಈ ವಿಚಿತ್ರ ಹೇಳಿಕೆ ನೀಡಿದ್ದಾರೆ.

“ಇದೆಲ್ಲವೂ ಸಾಮಾಜಿಕ ಮಾಧ್ಯಮದಲ್ಲಿ, ಮತ್ತು ಭಾರತೀಯ ಸಾಮಾಜಿಕ ಮಾಧ್ಯಮದಲ್ಲಿ ಬಂದಿರುವುದು, ನಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅಲ್ಲ. ಜೆಟ್‌ಗಳ ಅವಶೇಷಗಳು ಅವುಗಳ ಬದಿಯಲ್ಲಿ ಬಿದ್ದವು. ಅದು ಭಾರತೀಯ ಮಾಧ್ಯಮದಲ್ಲೆಲ್ಲಾ ಹರಡಿದೆ” ಎಂದು ಪತ್ರಕರ್ತರ ಪ್ರಶ್ನೆಗೆ ಇಂತಹ ವಿಚಿತ್ರ ಉತ್ತರ ಕೊಟ್ಟಿದ್ದಾರೆ.

ಭಾರತದ ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ-ಪರಿಶೀಲನಾ ಘಟಕವು ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಚಾನೆಲ್‌ಗಳು ಅಪಘಾತಕ್ಕೀಡಾದ ವಿಮಾನದ ಹಳೆಯ ಮತ್ತು ಸಂಬಂಧವಿಲ್ಲದ ಫೋಟೋವನ್ನು ಹಂಚಿಕೊಂಡಿವೆ ಮತ್ತು ಅದನ್ನು ಪತನಗೊಂಡ ರಫೇಲ್ ಎಂದು ಪ್ರಸಾರ ಮಾಡಲು ಪ್ರಯತ್ನಿಸುತ್ತಿವೆ ಎಂದು ವರದಿ ಮಾಡಿದೆ. ಈ ಚಿತ್ರವು 2021 ರಲ್ಲಿ ನಡೆದ ಅಪಘಾತದ ಚಿತ್ರ ಎಂದು ಅದು ಸಾಬೀತು ಪಡಿಸಿದೆ.

ಭಾರತ ಬುಧವಾರ ಬೆಳಿಗ್ಗೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತರಬೇತಿ ಶಿಬಿರಗಳು ಮತ್ತು ಲಾಂಚ್‌ಪ್ಯಾಡ್‌ಗಳು ಸೇರಿದಂತೆ ಭಯೋತ್ಪಾದಕ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು, ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಂಡಿತು ಮತ್ತು ಹಲವಾರು ಭಯೋತ್ಪಾದಕರನ್ನು ಕೊಂದು ಹಾಕಿತು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!