ಪ್ರಜ್ಞೆ ತಪ್ಪಿಸಲು ಹೋಗಿದ್ದೆ, ಮಗು ಸತ್ತೇ ಹೋಯ್ತು: ಮಗು ಕೊಲೆಗೆ ಕಾರಣ ಬಿಚ್ಚಿಟ್ಟ ಸುಚನಾ ಸೇಠ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಲ್ಕು ವರ್ಷದ ಮಗುವನ್ನು ಕೊಂದು ಸೂಟ್‌ಕೇಸ್‌ನಲ್ಲಿ ಇಟ್ಟಿದ್ದ ಸಿಇಒ ಸುಚನಾ ಸೇಠ್ ಇದೀಗ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಗೋವಾ ಪೊಲೀಸರು ವಿಚಾರಣೆ ನಡೆಸುವ ವೇಳೆ ತಂದೆ ಮಗ ಮಾತನಾಡುವುದು ಇಷ್ಟ ಇರಲಿಲ್ಲ. ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದೆ ಎಂದು ಹೇಳಿದ್ದಾರೆ.

ಪತಿ ವೆಂಕಟರಮಣನಿಗೆ ಮಗುವನ್ನು ವಿಡಿಯೋ ಕಾಲ್ ಮಾಡಿ ತೋರಿಸಲು ಕೋರ್ಟ್ ಹೇಳಿತ್ತು. ನನ್ನ ಮಗು ನನಗೆ ಮಾತ್ರ ಬೇಕಿತ್ತು. ಆತನಿಗೆ ತೋರಿಸಲು ಇಷ್ಟ ಇರಲಿಲ್ಲ. ದಿಂಬು ಒತ್ತಿಹಿಡಿದೆ. ಮಗು ಮೃತಪಟ್ಟಿತ್ತು ಎಂದು ಹೇಳಿದ್ದಾಳೆ.

ಗಾಬರಿಯಾಯ್ತು ಮಗುವನ್ನು ಕೊಂದಿದ್ದೇನೆ ಎನ್ನುವುದನ್ನು ಅರಗಿಸಿಕೊಳ್ಳಲಾರದೆ ಸೂಸೈಡ್‌ಗೆ ಯತ್ನಿಸಿದೆ. ಸಾಧ್ಯವಾಗಲಿಲ್ಲ. ಗಾಬರಿಯಾಗಿ ಸೂಟ್‌ಕೇಸ್‌ನಲ್ಲಿ ಮಗು ದೇಹ ಹಾಕಿ ಹೊರಟೆ ಎಂದು ಹೇಳಿದ್ದಾಳೆ.

ಇತ್ತ ಮಗುವಿನ ತಂದೆ ವೆಂಕಟರಮಣ ಇಂಡೋನೇಷ್ಯಾದಿಂದ ಭಾರತಕ್ಕೆ ಆಗಮಿಸಿದ್ದು, ನೆನ್ನೆಯಷ್ಟೇ ವಿಡಿಯೋ ಕಾಲ್‌ನಲ್ಲಿ ಕಂಡಿದ್ದ ತಮ್ಮ ಕಂದನ ಮೃತದೇಹ ನೋಡಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಕುಟುಂಬದವರ ಜೊತೆಗೂಡಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!