Wednesday, September 27, 2023

Latest Posts

ನನ್ನ ಜೀವನಕ್ಕೆ ಪರಿಣಿತಿ ಕೊಟ್ಟಿದ್ದಕ್ಕಾಗಿ ಭಗವಂತನಿಗೆ ಸದಾ ಧನ್ಯವಾದ ತಿಳಿಸುತ್ತೇನೆ: ರಾಘವ್​ ಚಡ್ಡಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್​ ಮತ್ತೊಂದು ಅದ್ಧೂರಿ ವಿವಾಹಕ್ಕೆ ಸಜ್ಜಾಗಿದ್ದು, ನಟಿ ಪರಿಣಿತಿ ಚೋಪ್ರಾ ಮತ್ತು ಆಮ್​ ಆದ್ಮಿ ಪಕ್ಷದ ಯುವ ನಾಯಕ ರಾಘವ್​ ಚಡ್ಡಾ ಮದುವೆಗೆ ಸಿದ್ಧತೆ ನಡೆಯುತ್ತಿದೆ.

ಇದೇ ಸೆಪ್ಟೆಂಬರ್​ 23 ಮತ್ತು 24 ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಹೋಟೆಲ್​ ಲೀಲಾ ಪ್ಯಾಲೆಸ್​ ಮತ್ತು ಉದಯವಿಲಾಸ್​ನಲ್ಲಿ ವಿವಾಹ ಶಾಸ್ತ್ರಗಳು ನಡೆಯಲಿದೆ.

ಈ ಬಗ್ಗೆ ಸಂಸದ ರಾಘವ್​ ಚಡ್ಡಾ ಅವರಿಗೆ ಪ್ರಶ್ನೆ ಎದುರಾಗಿದ್ದು, ‘ಬಹಳ ಸಂತೋಷವಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಆಮ್​ ಆದ್ಮಿ ಪಕ್ಷದ ಸಂಸದ ರಾಘವ್​ ಚಡ್ಡಾ ತಮ್ಮ ಪ್ರೀತಿ, ಮದುವೆ ಬಗ್ಗೆ ಮಾತನಾಡಿದರು. ತಮ್ಮಿಬ್ಬರ ನಡುವೆ ಒಂದು ವಿಶೇಷವಾದ, ಅದ್ಭುತ ಸಂಬಂಧ ಬೆಳೆದಿದೆ ಎಂದು ತಿಳಿಸಿದರು. ಜೀವನದಲ್ಲಿ ಪರಿಣಿತಿ ಚೋಪ್ರಾ ಸಿಕ್ಕಿರುವುದನ್ನು ಒಂದು ದೈವಿಕ ಕೊಡುಗೆ ಎಂದು ವರ್ಣಿಸಿದರು.

ನಾವು ಭೇಟಿಯಾದೆವು. ಅದೊಂದು ಮ್ಯಾಜಿಕಲ್​ ಕ್ಷಣ. ಆ ಮೀಟಿಂಗ್​ ಬಹಳ ನ್ಯಾಚುರಲ್​ ಆಗೇ ಇತ್ತು. ನನ್ನ ಜೀವನಕ್ಕೆ ಪರಿಣಿತಿ ಅವರನ್ನು ಕೊಟ್ಟಿದ್ದಕ್ಕಾಗಿ ಆ ಭಗವಂತನಿಗೆ ಸದಾ ಧನ್ಯವಾದ ತಿಳಿಸುತ್ತೇನೆ. ನನಗೆ ಇದೊಂದು ದೊಡ್ಡ ಆಶೀರ್ವಾದ. ನಾನು ಪರಿಣಿತಿ ಅವರನ್ನು ಜೀವನ ಸಂಗಾತಿಯಾಗಿ ಹೊಂದಿರುವುದಕ್ಕೆ ಬಹಳ ಖುಷಿಯಾಗಿದ್ದೇನೆ. ಈ ಮೊದಲೇ ತಿಳಿಸಿದಂತೆ ಅವರನ್ನು ನನಗಾಗಿ ಕೊಟ್ಟಿದ್ದಕ್ಕೆ ಆ ದೇವರಲ್ಲಿ ಧನ್ಯವಾದ ತಿಳಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!