ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವ ಸಂಘಟನೆಗಳೂ ಯಾವ ಬಂದೂ ಮಾಡೋ ಹಾಗಿಲ್ಲ, ಇಷ್ಟು ಹೇಳಿದ ಮೇಲೂ ಬಂದ್ ಮಾಡಿದ ಸಂಘಟನೆ ವಿರುದ್ಧ ಕಾನೂನು ಕ್ರಮ ಕೈಗೊಳ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಖಡಕ್ ವಾರ್ನಿಂಗ್ ನೀಡಿದ್ದಾರೆ.
ತಮಿಳುನಾಡಿಗೆ ನೀರು ಹರಿಸುತ್ತಿರುವ ನಡೆಯನ್ನು ವಿರೋಧಿಸಿ ನಾಳೆ ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ವಿರೋಧ ಪಕ್ಷಗಳು ಬಂದ್ಗೆ ಸಾಥ್ ನೀಡಿವೆ.
ಈ ಬಗ್ಗೆ ಗೃಹ ಸಚಿವರು ಮಾತನಾಡಿದ್ದು, ಪ್ರತಿಭಟನೆ ಮಾಡಿ ಆದರೆ ಬಂದ್ ಮಾಡುವಂತಿಲ್ಲ. ಕೋರ್ಟ್ ಹೇಳಿಲ್ವಾ? ಬಂದ್ ಮಾಡಬಾರದು ಅಂತ, ಇದನ್ನು ಮೀರಿ ಬಂದ್ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಬೆಂಗಳೂರು ಬಂದ್ನಿಂದ ಈಗಾಗಲೇ ೨,೦೦೦ ಕೋಟಿ ನಷ್ಟ ಆಗಿದೆ. ಈಗ ಕರ್ನಾಟಕ ಬಂದ್ ಮಾಡಿದ್ರೆ ಇನ್ನೂ ಸಮಸ್ಯೆಯಾಗುತ್ತದೆ. ರಾಜ್ಯದಲ್ಲಿ ಮಳೆ ಇಲ್ಲ, ಜನರು ಈಗಾಗಲೇ ಸಮಸ್ಯೆಯಲ್ಲಿದ್ದಾರೆ. ಇನ್ನು ಬಂದ್ ಮಾಡಿ ಸಮಸ್ಯೆ ಹೆಚ್ಯಾಕೆ ಮಾಡ್ತೀರಿ ಎಂದಿದ್ದಾರೆ.