ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದು ಕಾರ್ಯಕರ್ತರನ್ನ ಸರ್ಕಾರವೇ ಟಾರ್ಗೆಟ್ ಮಾಡುತ್ತಿದೆ. ಸರ್ಕಾರದ ಪ್ರೇರೇಪಣೆಯಿಂದಲೇ ಕಿಡಿಗೇಡಿಗಳು ಇಂತಹ ಪೋಸ್ಟ್ ಹಾಕಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಇದು ವ್ಯವಸ್ಥೆಯ ವೈಫಲ್ಯ. ಸುಹಾಸ್ ಶೆಟ್ಟಿಗೆ ಪೊಲೀಸರು ರಕ್ಷಣೆ ಕೊಡಲಿಲ್ಲ. ಆಯುಧ ಇಟ್ಟುಕೊಳ್ಳಲು ಅವಕಾಶ ಕೊಡಲಿಲ್ಲ. ಸುಹಾಸ್ ಬಗ್ಗೆ ಪೊಲೀಸರೇ ಸುಳಿವು ಕೊಟ್ಟ ಆರೋಪ ಇದೆ, ಈಗ ಮತ್ತಿಬ್ಬರು ಹಿಂದೂ ಕಾರ್ಯಕರ್ತರು ಮುಂದಿನ ಟಾರ್ಗೆಟ್ ಅಂತ ಪೋಸ್ಟ್ ಹಾಕಿದ್ದಾರೆ. ಹಿಂದು ಕಾರ್ಯಕರ್ತರನ್ನ ಸರ್ಕಾರವೇ ಟಾರ್ಗೆಟ್ ಮಾಡ್ತಿದೆ. ಸರ್ಕಾರದ ಪ್ರೇರೇಪಣೆಯಿಂದ ಇಂತಹ ಪೋಸ್ಟ್ ಹಾಕಿದ್ದಾರೆ. ಸಮಾಜ ವಿರೋಧಿ ಕೃತ್ಯ ಮಾಡ್ತಾರೋ ಅವರ ವಿರುದ್ಧ ಶೂಟ್ ಅಂಡ್ ಸೈಟ್ ಆರ್ಡರ್ ಮಾಡಿ ಮಾಹಿತಿ ತರಿಸಿಕೊಳ್ಳುತ್ತೇನೆ. ಕ್ರಮ ತೆಗೆದುಕೊಳ್ಳುತ್ತೇವೆ ಅನ್ನೋದು ಬಿಡಿ. ಕಠಿಣ ಕ್ರಮ ಕೈಗೊಳ್ಳದಿದ್ರೆ ಅಧಿಕಾರ ಬಿಟ್ಟು ತೊಲಗಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.