ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ವಾತಾವರಣ ಹದಗೆಟ್ಟಿದೆ. ಯಾರು ಯಾವಾಗ ಯುದ್ಧ ಸಾರುತ್ತಾರೋ? ಇಲ್ಲವೋ ಎಂಬ ಆತಂಕ ಸೃಷ್ಟಿ ಆಗಿದೆ. ಇದರ ನಡುವೆ ಪಾಕಿಸ್ತಾನದ ಸಂಸದ ಭಾರತ-ಪಾಕ್ ನಡುವೆ ಯುದ್ಧ ಶುರುವಾದ್ರೆ ನಾನು ಇಂಗ್ಲೆಂಡ್ಗೆ ಓಡಿಹೋಗುವುದಾಗಿ ಹೇಳಿದ್ದಾರೆ.
ಪತ್ರಕರ್ತರೊಬ್ಬರು ಭಾರತದೊಂದಿಗೆ ಯುದ್ಧವಾದರೆ ಗಡಿಗೆ ಬಂದೂಕು ಹಿಡಿದು ಹೋಗುತ್ತೀರಾ? ಎಂದುವೆ ಪಾಕಿಸ್ತಾನದ ಸಂಸದ ಶೇರ್ ಅಫ್ಜಲ್ ಖಾನ್ ಮಾರ್ವತ್ ಗೆ ಪ್ರಶ್ನೆ ಕೇಳಿದ್ದು, ಈ ವೇಳೆನಾನು ಇಂಗ್ಲೆಂಡ್ಗೆ ಹೋಗುತ್ತೇನೆ ಎಂದು ಉತ್ತರ ನೀಡಿದ್ದಾರೆ. ಇದೀಗ ಈ ಮಾತು ಭಾರೀ ವೈರಲ್ ಆಗಿದೆ.
ಸದ್ಯ ಜೈಲು ವಾಸ ಅನುಭವಿಸುತ್ತಿರುವ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ರ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದಲ್ಲಿ ಮಾರ್ವತ್ ಅವರು ಈ ಹಿಂದೆ ಸದಸ್ಯರಾಗಿದ್ದರು. ತಾವಿದ್ದ ಪಕ್ಷದ ಬಗ್ಗೆ ಮತ್ತು ಅದರ ಲೀಡರ್ಶಿಪ್ ಬಗ್ಗೆ ಪದೇ ಪದೇ ಟೀಕೆ ಮಾಡಿದ್ದರು, ವ್ಯಂಗ್ಯ ಮಾಡಿದ್ದರು. ಹೀಗಾಗಿ ಅವರನ್ನು ಪಕ್ಷದಿಂದ ಹೊರಗಡೆ ಹಾಕಲಾಗಿತ್ತು.