ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೇಲೆ ದಾಳಿ ಮಾಡಿದರೆ ಹಾಗೂ ಸಿಂಧು ಜಲ ಒಪ್ಪಂದವನ್ನು ರದ್ದು ಮಾಡಿ ನೀರು ನಿಲ್ಲಿಸಿದರೆ ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿ ಪಾಕಿಸ್ತಾನ ಮತ್ತೊಮ್ಮೆ ಉದ್ಧಟತನ ತೋರಿಸಿದೆ.
ಪಹಲ್ಗಾಮ್ ಉಗ್ರ ದಾಳಿಯ ನಂತರ ಭಾರತ ಪಾಕ್ ಮೇಲೆ ಒಂದರ ಮೇಲೊಂದು ಹೊಡೆತ ನೀಡುತ್ತಿದ್ದು, ಆದರೂ ತನ್ನ ದರ್ಪ ನಿಲ್ಲಸಲ್ಲಿಲ್ಲ. ಇದೀಗ ರಷ್ಯಾದಲ್ಲಿನ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ, ಭಾರತದ ಯಾವುದೇ ಆಕ್ರಮಣಕ್ಕೆ ಪ್ರತಿಕ್ರಿಯಿಸಲು ಪಾಕಿಸ್ತಾನ ಸಿದ್ಧವಾಗಿದೆ. ಭಾರತದ ದಾಳಿಯನ್ನು ನಮ್ಮ ಸೇನೆ ಎದುರಿಸಲಿದೆ ಎಂದಿದ್ದಾರೆ.
ಭಾರತ ನಮ್ಮ ಮೇಲೆ ದಾಳಿ ಮಾಡಿದಲ್ಲಿ ಪೂರ್ಣ ಪ್ರಮಾಣದ ಬಲದೊಂದಿಗೆ ಎದುರಿಸುತ್ತೇವೆ. ಅದು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಯುದ್ಧವಾದರೂ ಸರಿ. ಎರಡೂ ರೀತಿಯಲ್ಲಿ ನಮ್ಮ ಸೇನೆ ಹೋರಾಡಲಿದೆ ಎಂದು ಜಮಾಲಿ ಹೇಳಿದ್ದಾರೆ.
ಅದು ಸಿಂಧು ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ನೀರು ಹರಿಸದಿದ್ದರೆ ಅಥವಾ ನೀರನ್ನು ಬೇರೆಡೆಗೆ ಹರಿಸಿದಲ್ಲಿ ಅದು ಯುದ್ಧಕ್ಕೆ ಪ್ರಚೋದನೆ ನೀಡಿದಂತೆ. ಇದರ ವಿರುದ್ಧವೂ ನಮ್ಮ ಸೇನೆ ನ್ಯೂಕ್ಲಿಯರ್ ದಾಳಿ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಪರಮಾಣು ಸಾಮರ್ಥ್ಯವನ್ನು ಹೊಂದಿರುವ ಉಭಯ ರಾಷ್ಟ್ರಗಳು ಉದ್ವಿಗ್ನ ಶಮನಕ್ಕೆ ಯತ್ನಿಸಬೇಕು. ಪಹಲ್ಗಾಮ್ ದಾಳಿಯ ಬಗ್ಗೆ ತಟಸ್ಥ ಮತ್ತು ವಿಶ್ವಾಸಾರ್ಹ ತನಿಖೆ ನಡೆಸಬೇಕು. ಅಂತಾರಾಷ್ಟ್ರೀಯ ಸಮುದಾಯವು ಇದರಲ್ಲಿ ಪಾತ್ರ ವಹಿಸುವ ಅವಶ್ಯತೆ ಇರುವ ಕಾರಣ, ಚೀನಾ ಮತ್ತು ರಷ್ಯಾ ದೇಶಗಳು ತನಿಖೆಯಲ್ಲಿ ಭಾಗವಹಿಸಬೇಕು ಎಂದು ಜಮಾಲಿ ಹೇಳಿದ್ದಾರೆ.