ಬರಿ ಸ್ಯಾಂಪಲ್ ಗೆ ಹಿಂಗಾದ್ರೆ ಮುಂದೆ ನಡೆಯೋ ಮಹಾಯುದ್ಧಕ್ಕೆ ಏನ್ ಮಾಡ್ತಾರೋ ಕಾಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಪಾಕ್ ಉಗ್ರರು 26 ಭಾರತೀಯ ನಾಗರೀಕರನ್ನು ಹತ್ಯೆ ಮಾಡಿದಕ್ಕಾಗಿ, ಇದೀಗ ಭಾರತವು ಪ್ರತೀಕಾರ ತೀರಿಸಿಕೊಂಡಿದೆ.

ಭಾರತವು ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗೆಳ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ವಿರುದ್ದ ಸೇಡು ತೀರಿಸಿಕೊಂಡಿದೆ.

ಪಾಕ್ ಭಾರತದ ದಾಳಿಯಿಂದ ನಲುಗಿ ಹೋಗಿದ್ದು, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಪಾಕಿಸ್ತಾನಿ ಸುದ್ದಿನಿರೂಪಕಿ ಲೈವ್ ನಲ್ಲಿ ಅಳುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಈ ವಿಡಿಯೋವನ್ನು @RichKettle07 ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋ ದಲ್ಲಿ ಪಾಕಿಸ್ತಾನಿ ಸುದ್ದಿ ನಿರೂಪಕಿ ಲೈವ್ ನಲ್ಲಿ ಅಳುತ್ತಿರುವುದನ್ನು ಕಾಣಬಹುದು. ಇಲ್ಲಿನ ಅಮಾಯಕ ಜನರನ್ನು ಅಲ್ಲಾನೆ ಕಾಪಾಡಬೇಕು, ನಮ್ಮ ಮೇಲೆ ದೇವರೇ ಕರುಣೆ ತೋರಬೇಕು ಎಂದು ಅಳುತ್ತಾ ನಿರೂಪಣೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!