ಹೊಸದಿಗಂತ ವರದಿ,ಅಂಕೋಲಾ
ವನ್ಯಜೀವಿ ಜಿಂಕೆ ಕೋಡು ಸಾಗಿಸುತ್ತಿದ್ದ ವಾಹನದ ಮೇಲೆ ಜಿಲ್ಲಾ ವಿಶೇಷ ಪೋಲಿಸ್ ದಳ ಮತ್ತು ಅಂಕೋಲಾ ಪೊಲೀಸರು ದಾಳಿ ನಡೆಸಿ ಜಿಂಕೆಯ
ಎರಡು ಕೋಡುಗಳನ್ನು ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ತಾಲೂಕಿನ ಕಲ್ಲೇಶ್ವರ ನಿವಾಸಿಗಳಾದ ಸೂರಜ ಶ್ರೀಧರ ಭಂಡಾರಿ (32) ಸಂದೀಪ ದಯಾನಂದ ಭಂಡಾರಿ(25) ಪ್ರಸಾದ ರಾಮಾ ದೇಸಾಯಿ ಮತ್ತು ಹಳಿಯಾಳ ನಿವಾಸಿ ಶೌಕತ್ ಹುಸೇನ್ ಸಾಬ್ (22) ಬಂಧಿತ ಆರೋಪಿಗಳಾಗಿದ್ದು ಸ್ಥಳೀಯ ಆರೋಪಿಗಳಿಂದ ಕೋಡು ಖರೀದಿಸಲು ಹಳಿಯಾಳದಿಂದ ಶೌಕತ್ ಹುಸೇನ್ ಆಗಮಿಸಿದ್ದ ಇವರೆಲ್ಲ ಸೇರಿ ವ್ಯವಹಾರ ಕುದುರಿಸಲು ಆರ್ಟಿಕಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಾಸ್ತಿಕಟ್ಟ ಬಳಿ ಪೊಲೀಸರು ದಾಳಿ ನಡೆಸಿ ಜಿಂಕೆ ಕೋಡು ಸಮೇತ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಕೋಲಾ ಸಿ.ಪಿ.ಐ ಸಂತೋಷ ಶೆಟ್ಟಿ, ಜಿಲ್ಲಾ ಪೊಲೀಸ್ ವಿಶೇಷ ದಳದ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.