ಹೊಸದಿಗಂತ ವರದಿ ಜೋಯಿಡಾ:
ತಾಲೂಕಿನ ಅನಮೋಡ ಚೆಕಪೋಸ್ಟ ಬಳಿ ಖಚಿತ ಮಾಹಿತಿ ಆಧಾರದ ಮೇಲೆ ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ವಾಹನ ಮತ್ತು ಸರಾಯಿಯನ್ನು ಅನಮೋಡ ಅಬಕಾರಿ ಪೋಲಿಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ಕೃಷ್ಣ ಪರಶುರಾಮ ಹೊಸಪೇಟೆ ಎನ್ನುವವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನದ ಮಾಲಿಕನ್ನು ಪತ್ತೆ ಹಚ್ಚಲಾಗುತ್ತಿದೆ. ವಾಹನ ಸಂಖ್ಯೆ KA 35 C6889 ರಲ್ಲಿ 51ಲೀ ವಿವಿಧ ರೀತಿಯ ಮದ್ಯ ವಾಹನ ಸೇರಿ ಒಟ್ಟು ಅಂದಾಜು ಮೌಲ್ಯ 1439600 ರೂ ಗಳಾಗಿದೆ.
ಈ ಕಾರ್ಯಾಚರಣೆ ಅಬಕಾರಿ ಉಪ ಆಯುಕ್ತರು ಉತ್ತರಕನ್ನಡ ಜಿಲ್ಲೆ ಜಗದೀಶ್ ಎನ್ ಕೆ ಹಾಗೂ ಅಬಕಾರಿ ಉಪ ಅಧಿಕ್ಷಕರು ಯಲ್ಲಾಪುರ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅನಮೋಡ ಅಬಕಾರಿ ಪಿ.ಎಸ್.ಐ ಟಿ.ಬಿ.ಮಲ್ಲಣ್ಣನವರ ಸಿಬ್ಬಂದಿಗಳಾದ ರಾಜು ಭಟ್ಕಲ್,ವಾಯ್ ಎಪ್ ಕಣ್ಣೂರ,ಯು ಎನ್ ತುಳಜಿ, ಎನ್ ಜಿ ಜೋಗಳೇಕರ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.