ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ತಾವು ಘೋಷಿಸಿದ ೫ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದ ಕಾಂಗ್ರೆಸ್ ಇದೀಗ ನಾನಾ ಕಾರಣಗಳನ್ನು ಮುಂದಿಡುತ್ತಿದ್ದು, ಇದೀಗ 5 ಯೋಜನೆಗಳಲ್ಲಿ ಮೂರು ಗ್ಯಾರಂಟಿ ಮಾತ್ರ ಮೊದಲ ಹಂತದಲ್ಲಿ ಜಾರಿ ಮಾಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾವು ಅನ್ನಭಾಗ್ಯ, ಗೃಹ ಜ್ಯೋತಿ, ಉಚಿತ ಬಸ್ ಪ್ರಯಾಣ ಮಾತ್ರ ಮೊದಲ ಹಂತದಲ್ಲಿ ಜಾರಿಯಾಗುತ್ತಿದ್ದು, ಯುವನಿಧಿ ಮತ್ತು ಗೃಹ ಲಕ್ಷ್ಮೀ ಗ್ಯಾರಂಟಿ ಎರಡನೇ ಹಂತದಲ್ಲಿ ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಕೊಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಸಚಿವರು ಅಧಿಕಾರಿಗಳ ಜೊತೆಗೆ ಸಿಎಂ ಚರ್ಚೆ ಮಾಡಿದ್ದಾರೆ. ಹಣಕಾಸಿನ ಲಭ್ಯತೆ ಮತ್ತು ವೆಚ್ಚ ಕುರಿತು ಚರ್ಚೆ ಆಗಿದೆ. ಸಚಿವ ಸಂಪುಟ ಸಭೆ ಶುಕ್ರವಾರ ನಡೆಯಲಿದೆ. ಸಂಪುಟ ಸಭೆಯಲ್ಲಿ ಚರ್ಚೆ ಮಾಡ್ತೇವೆ . ನಾವು ಗ್ಯಾರಂಟಿ ಜಾರಿಗೆ ಬದ್ಧವಾಗಿದ್ದೇವೆ ಎಂದರು.
ಯೋಜನೆಗಳಿಗೆ ಕಂಡೀಷನ್ ಇರುತ್ತಾ ಅನ್ನೋ ಬಗ್ಗೆ ಸ್ಪಷ್ಟನೆ ಕೊಟ್ಟ ಡಿಕೆಶಿವಕುಮಾರ್, ಯಾರಿಗೆ ಬಸ್? ಎಲ್ಲಿಂದ? ಎಲ್ಲಾ ಲೆಕ್ಕಾಚಾರ ಬೇಕು. ಭತ್ಯೆ ಕೊಡುವ ಬಗ್ಗೆ ಸಹ ಲೆಕ್ಕಾಚಾರ ಹಾಕಬೇಕು ಎಂದಿದ್ದಾರೆ.
ಸಚಿವರ ಸಭೆಯಲ್ಲಿ ಹಣಕಾಸು ಇಲಾಖೆಯ ವಿರೋಧ ವ್ಯಕ್ತಪಡಿಸಿದ್ದು, ಗ್ಯಾರಂಟಿ ಜಾರಿ ಸದ್ಯಕ್ಕೆ ಕಷ್ಟ ಅಂತ ಅಭಿಪ್ರಾಯ ಪಟ್ಟಿದ್ದಾರೆ. ಬಜೆಟ್ allocation ಇಲ್ಲ ಎಂದು ಹಣಕಾಸು ಇಲಾಖೆ ಹೇಳಿದೆ. ಆದರೆ ಗ್ಯಾರಂಟಿ ಜಾರಿ ಮಾಡಲು ಸಚಿವರು ಪಟ್ಟು ಹಿಡಿದಿದ್ದು, ಒಂದು ದಿನ ಕಾಲಾವಕಾಶ ಹಣಕಾಸು ಇಲಾಖೆ ಅಧಿಕಾರಿಗಳು ಕೇಳಿದ್ದಾರೆ. ಹೀಗಾಗಿ ಶುಕ್ರವಾರ ಸಚಿವ ಸಂಪುಟ ಸಭೆ ನಿಗದಿಯಾಗಿದೆ.