ಕಡಗದಾಳು ಗ್ರಾಮದಲ್ಲಿ ಹಸುಗಳ ಕಳ್ಳತನ ಪ್ರಕರಣ: ಐವರು ಆರೋಪಿಗಳ ಬಂಧನ

ಹೊಸ ದಿಗಂತ ವರದಿ, ಮಡಿಕೇರಿ:

ಕಡಗದಾಳು ಗ್ರಾಮದಲ್ಲಿ ಹಸುಗಳನ್ನು ಕಳ್ಳತನ ಮಾಡಿದ ಆರೋಪದಡಿ ಐವರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪೊನ್ನತ್‍ಮೊಟ್ಟೆಯ ಹುಸೇನ್ (45), ಹಮೀದ್ (40), ಕೊಂಡಂಗೇರಿಯ ಸಲೀಂ (31), ಕಡಗದಾಳುವಿನ ಚಂಗಪ್ಪ (40) ಹಾಗೂ ಅಭ್ಯತ್ ಮಂಗಲದ ಶ್ರೀಧರ (60) ಬಂಧಿತ ಆರೋಪಿಗಳಾಗಿದ್ದಾರೆ.
ಹಸುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಿನು ಸೋಮಣ್ಣ ಹಾಗೂ ಮಂದಣ್ಣ ಎಂಬವರು ದೂರು ನೀಡಿದ್ದರು.
ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಕೂಡಾ ಕಡಗದಾಳುವಿನಲ್ಲಿ ಪ್ರತಿಭಟನೆ ನಡೆಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!