ಬೆಳ್ಳಂಬೆಳಗ್ಗೆ ಎಟಿಎಂ ಒಡೆದು 25 ಲಕ್ಷ ರೂ. ದರೋಡೆ: ಪ್ರಕರಣ ದಾಖಲು

ಹೊಸದಿಗಂತ, ಬೀದರ್:

ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಹುಮನಾಬಾದ್ ತಾಲೂಕಿನ ಹಳಿಖೇಡ (ಬಿ)ನಲ್ಲಿ SBI ಎಟಿಎಮ್ ನಿಂದ 25 ಲಕ್ಷ ರೂ. ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹಳಿಖೇಡ (ಬಿ) ನಲ್ಲಿ ಕುಲಕರ್ಣಿ ಕಾಂಪ್ಲೆಕ್ಸ್ ನಲ್ಲಿ ಬೆಳಗಿನ ಜಾವ ದರೋಡೆಕೋರರು ಬಂದು ಎ.ಟಿ.ಎಮ್. ಶಟರ ಬೀಗ ಗ್ಯಾಸಕಟರ ನಿಂದ ಮುರಿದು ಎಂ.ಟಿ.ಎಮ್. ನಲ್ಲಿದ್ದ ಸುಮಾರು ಇಪ್ಪತ್ತೈದು ಲಕ್ಷ ರೂಪಾಯಿ ಲೂಟಿ ಮಾಡಿರುವುದಾಗಿ ತಿಳಿದು ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಹಳ್ಳಿಖೇಡ (ಬಿ) ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದರು.

ತದನಂತರ ಕೂಡಲೇ ಹುಮನಾಬಾದ್ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಹಳ್ಳಿಖೇಡ ಪಿ.ಎಸ್.ಐ., ಹುಮನಾಬಾದ್ ಪಿ.ಎಸ್.ಐ., ಚಿಟಗುಪ್ಪಾ ಪಿಎಸ್ಐ ಬಸವಕಲ್ಯಾಣ ಪಿ.ಎಸ್.ಐ. ಹಾಗೂ ಸಿಬ್ಬಂದಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸೋಮವಾರ ಕರ್ನಾಟಕ-ಮಹಾರಾಷ್ಟ್ರ ಗಡಿ ಬಳಿಯ ಉಮರ್ಗಾ ಪಟ್ಟಣದಲ್ಲಿಯೂ ಇದೇ ರೀತಿ ಎಟಿಎಂ ಒಡೆದು ಹಣ ದರೋಡೆ ಮಾಡಲಾಗಿದ್ದು ಪೋಲೀಸ್ ಅಧಿಕಾರಿಗಳು ಎರಡು ದರೋಡೆಗೆ ನಡುವೆ ಮೆಲುಕು ಹಾಕಿ ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!