ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಂಟ್ರಲ್ ವಿಸ್ಟಾ ಯೋಜನೆಯಡಿ ನಿರ್ಮಿಸಲಾದ ನೂತನ ಸಂಸತ್ ಭವನ (New Parliament Building)ವನ್ನು ಮೇ 28ರಂದು ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಉದ್ಘಾಟನೆ ಮಾಡುತ್ತಾರೆ ಎಂದು ಹೇಳಲಾಗಿತ್ತು.
ಇದೀಗ ಆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕ್ಯಾತೆ ತೆಗೆದಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿದ ಅವರು ‘ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ಉದ್ಘಾಟನೆ ಮಾಡಬೇಕು ಹೊರತು ಪ್ರಧಾನಮಂತ್ರಿ ಮಾಡಬಾರದು’ ಎಂದು ಹೇಳಿದ್ದಾರೆ.
नए संसद भवन का उद्घाटन राष्ट्रपति जी को ही करना चाहिए, प्रधानमंत्री को नहीं!
— Rahul Gandhi (@RahulGandhi) May 21, 2023
ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿಯರು ಉದ್ಘಾಟನೆ ಮಾಡಲಿದ್ದಾರೆ. ಲೋಕಸಭೆ ಸ್ಫೀಕರ್ ಓಂ ಬಿರ್ಲಾ ಅವರು ಈಗಾಗಲೇ ಪ್ರಧಾನಿಯನ್ನು ಭೇಟಿಯಾಗಿ ಆಹ್ವಾನ ನೀಡಿದ್ದಾರೆ ಎಂದು ಮೇ 18ರಂದು ಲೋಕಸಭೆ ಸಚಿವಾಲಯ ತಿಳಿಸಿತ್ತು. ಅದರ ಬೆನ್ನಲ್ಲೇ ಪ್ರತಿಪ್ರಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೊಸ ಸಂಸತ್ ಭವನವನ್ನು ರಾಷ್ಟ್ರಪತಿ ಉದ್ಘಾಟನೆ ಮಾಡಬೇಕೇ ಹೊರತು ಸರ್ಕಾರ ಮುಖ್ಯಸ್ಥರಲ್ಲ ಎನ್ನುತ್ತಿದ್ದಾರೆ.
ಮೇ 19ರಂದು ಟ್ವೀಟ್ ಮಾಡಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ‘ಪ್ರಧಾನಿಯವರು ಯಾಕೆ ನೂತನ ಸಂಸತ್ ಭವನ ಉದ್ಘಾಟನೆ ಮಾಡುತ್ತಿದ್ದಾರೆ? ಪ್ರಧಾನಿಯವರು ಕಾರ್ಯಾಂಗದ ಮುಖ್ಯಸ್ಥರೇ ಹೊರತು ಶಾಸಕಾಂಗಕ್ಕೆ ಮುಖ್ಯಸ್ಥರಲ್ಲ. ಈ ಸಂಸತ್ ಭವನವನ್ನು ಲೋಸಕಭೆ ಸ್ಪೀಕರ್ ಅಥವಾ ರಾಜ್ಯಸಭಾ ಅಧ್ಯಕ್ಷರು ಉದ್ಘಾಟಿಸಬಹುದು. ಇದನ್ನು ಸಾರ್ವಜನಿಕರ ಹಣದಿಂದಲೇ ಕಟ್ಟಲಾಗಿದೆ. ಆದರೆ ಅದ್ಯಾಕೆ ಪ್ರಧಾನಿಯವರು ಹೀಗಾಡುತ್ತಿದ್ದಾರೆ. ಅವರ ಸ್ನೇಹಿತರು ತಮ್ಮ ಖಾಸಗಿ ಹಣದಿಂದ ನೂತನ ಸಂಸತ್ ಭವನ ಕಟ್ಟಿಸಿದಂತೆ ಆಡುತ್ತಿದ್ದಾರಲ್ಲ’ ಎಂದು ವ್ಯಂಗ್ಯವಾಡಿದ್ದರು.
ತೃಣಮೂಲ ಕಾಂಗ್ರೆಸ್ ಸಂಸದ ಸುಖೇಂದು ಸೇಖರ್ ರಾಯ್ ಅವರು, ನೂತನ ಸಂಸತ್ ಭವನವನ್ನು ವೀರ ಸಾವರ್ಕರ್ ಜನ್ಮದಿನದಂದೇ ಉದ್ಘಾಟನೆ ಮಾಡುವುದನ್ನು ವಿರೋಧಿಸಿದ್ದರು.
ನೂತನ ಸಂಸತ್ ಭವನ ಮೇ 28ಕ್ಕೆ, ಸಾವರ್ಕರ್ ಜಯಂತಿಯಂದು ಉದ್ಘಾಟನೆಯಾಗುತ್ತಿರುವುದು ಮಹಾತ್ಮ ಗಾಂಧಿ, ಜವಾಹರ್ಲಾಲು ನೆಹರು, ಸುಭಾಷ್ ಚಂದ್ರ ಬೋಸ್ ಮತ್ತಿತರರಿಗೆಲ್ಲ ಅವಮಾನ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದರು.