ಭಾರತಕ್ಕೆ ನೀತಿ ಪಾಠ ಮಾಡುವವರು ಬೇಡ, ಪಾರ್ಟ್ನರ್ ಗಳು ಬೇಕು: ಐರೋಪ್ಯ ದೇಶಗಳಿಗೆ ಜೈಶಂಕರ್ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತಕ್ಕೆ ನೀತಿ ಪಾಠ ಹೇಳುವವರು ಬೇಕಾಗಿಲ್ಲ, ಸಹವರ್ತಿಗಳು ಬೇಕು ಎಂದು ಐರೋಪ್ಯ ದೇಶಗಳಿಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ನಾವು ಜಗತ್ತಿನತ್ತ ನೋಡುತ್ತಿದ್ದೇವೆ ಎಂದರೆ ಅದು ಪಾರ್ಟ್ನರ್​​ಗಳನ್ನು ಎದುರು ನೋಡುತ್ತಿದ್ದೇವೆ ಎಂದರ್ಥ. ನಮಗೆ ಬೋಧಕರು ಬೇಕಾಗಿಲ್ಲ. ಅದರಲ್ಲೂ, ಹೊರಗೆ ಹೇಳೋದು ಒಂದು ಮನೆಯೊಳಗೆ ಮಾಡೋದು ಒಂದು ಎಂದಿರುವ ಬೋಧಕರಂತೂ ಬೇಕಾಗಿಲ್ಲ ಎಂದು ತಿಳಿಸಿದರು.

ಇನ್ನು ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಎ ಜೈಶಂಕರ್ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಅನೇಕ ವಿಚಾರದಲ್ಲಿ ಭಾರತದ ಮೇಲೆ ಒತ್ತಡ ಹಾಕಲು ಬಂದಾಗೆಲ್ಲಾ ಆ ದೇಶಗಳಿಗೆ ಅವರು ಖಡಕ್ ತಿರುಗೇಟು ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!