ಭಾರತ ಅದೃಷ್ಟಶಾಲಿ ದೇಶ ಅಲ್ಲ, ಶತ್ರುಗಳ ಮೇಲೆ ಹದ್ದಿನ ಕಣ್ಣಿರಲಿ: ಸೈನಿಕರಿಗೆ ರಾಜನಾಥ್‌ ಸಿಂಗ್‌ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭದ್ರತೆಯ ವಿಚಾರದಲ್ಲಿ ಭಾರತ ಅದೃಷ್ಟಶಾಲಿ ದೇಶ ಅಲ್ಲ. ನಮ್ಮ ಆಂತರಿಕ ಮತ್ತು ಬಾಹ್ಯ ವಿರೋಧಿಗಳ ಮೇಲೆ ಸೈನಿಕರು ಯಾವಾಗಲೂ ಹದ್ದಿನ ಕಣ್ಣಿಡಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಹೇಳಿದ್ದಾರೆ.

ಇಂದೋರ್‌ನಲ್ಲಿರುವ ಎರಡು ದಶಕಗಳಿಗೂ ಹಳೆಯದಾದ ಮಹೂ ಕಂಟೋನ್ಮೆಂಟ್‌ನಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ನಾವು ಆಂತರಿಕ ರಂಗದಲ್ಲೂ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇದರ ಹಿನ್ನೆಲೆಯಲ್ಲಿ, ನಾವು ಸುಮ್ಮನೆ, ಕಾಳಜಿಯಿಲ್ಲದೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಶತ್ರುಗಳು, ಆಂತರಿಕ ಅಥವಾ ಬಾಹ್ಯವಾಗಿದ್ದರೂ, ಯಾವಾಗಲೂ ಸಕ್ರಿಯರಾಗಿರುತ್ತಾರೆ. ಈ ಸಂದರ್ಭಗಳಲ್ಲಿ, ನಾವು ಅವರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಅವರ ವಿರುದ್ಧ ಸೂಕ್ತ ಮತ್ತು ಸಕಾಲಿಕ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ದೇಶವನ್ನಾಗಿ ಮಾಡಲು, ಸೇನೆಯ ಪಾತ್ರ ಬಹಳ ನಿರ್ಣಾಯಕವಾಗಿದೆ ಎಂದರು.

ಭಾರತವನ್ನು ಅಭಿವೃದ್ಧಿ ಹೊಂದಿದ ಮತ್ತು ಆತ್ಮನಿರ್ಭರ ದೇಶವನ್ನಾಗಿಸುವಲ್ಲಿ ಸೇನೆಯ ಪಾತ್ರ ಮಹತ್ವದ್ದು ಎಂದು ಹೇಳಿದ ಅವರು, ಭದ್ರತಾ ಸನ್ನಿವೇಶವನ್ನು ಗಣನೆಗೆ ತೆಗೆದುಕೊಂಡರೆ, ನಮ್ಮ ಉತ್ತರ ಗಡಿ ಮತ್ತು ಪಶ್ಚಿಮ ಗಡಿ ನಿರಂತರವಾಗಿ ಸವಾಲುಗಳನ್ನು ಎದುರಿಸುತ್ತಿರುವ ಕಾರಣ ಭಾರತವು ತುಂಬಾ ಅದೃಷ್ಟಶಾಲಿ ದೇಶವಲ್ಲ ಎಂದು ಹೇಳಿದರು.

ಅಂದಹಾಗೆ ಇಂದೋರ್‌ನಿಂದ 25 ಕಿಮೀ ದೂರದಲ್ಲಿರುವ ಮಾವ್ ಕಂಟೋನ್ಮೆಂಟ್, ಇನ್‌ಫೆಂಟ್ರಿ ಮ್ಯೂಸಿಯಂ ಮತ್ತು ಆರ್ಮಿ ಮಾರ್ಕ್ಸ್‌ಮನ್‌ಶಿಪ್ ಯೂನಿಟ್ ಹೊರತುಪಡಿಸಿ ಮೂರು ಪ್ರಮುಖ ತರಬೇತಿ ಸಂಸ್ಥೆಗಳಾದ ಆರ್ಮಿ ವಾರ್ ಕಾಲೇಜು, ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್ ಮತ್ತು ಇನ್‌ಫೆಂಟ್ರಿ ಶಾಲೆಗಳಿಗೆ ನೆಲೆಯಾಗಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!