ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿದ್ದ ಹೌರಾ-ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಹಾನಿಯಾಗಿದ್ದು, ಸೋಮವಾರ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.
ಗುಡುಗು ಸಹಿತ ಮಳೆಯಿಂದಾಗಿ ರೈಲಿನ ಓವರ್ಹೆಡ್ ತಂತಿಗಳು ಹಾನಿಗೊಳಗಾಗಿದ್ದು ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆ ಗಾಳಿಗೆ ಒಂದೇ ಭಾರತ್ ರೈಲಿಗೆ ಹಾನಿಯುಂಟಾಗಿದೆ. ರೈಲಿನ ಮೇಲೆ ಮರಗಳು ಬಿದ್ದಿವೆ. ತಂತಿ ತುಂಡಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಚಾಲಕರ ಕ್ಯಾಬಿನ್ ಮುಂಭಾಗ, ಕಿಟಕಿಗಳಿಗೆ ಕೂಡ ಹಾನಿಯಾಗಿದೆ.