ಕೋಲಾರದಲ್ಲಿ ಅಮಾನುಷ ಘಟನೆ: ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳು, ರಕ್ಷಣೆಗೆ ಹೋದ ತಂದೆಯೂ ಮೃತ್ಯು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಗ್ರಾಮದ ವೃಷಬಾವತಿ ಕೆರೆಯಲ್ಲಿ ಸೆಲ್ಫಿ ತೆಗೆಯುವ ವೇಳೆ ಕೆರೆಗೆ ಬಿದ್ದ ಮಗಳನ್ನು ರಕ್ಷಿಸಲು ಯತ್ನಿಸಿ ತಂದೆಯೂ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಬೆಂಗಳೂರಿನ ನಿವಾಸಿಗಳಾದ ಸೈಯದ್ ಅಯೂಬ್ (35) ಮತ್ತು ಫಾತಿಮಾ(10) ಮೃತರು. ಮಜರಾಗೊಲ್ಲಹಳ್ಳಿಗೆ ಮದುವೆಗೆಂದು ಬಂದಿದ್ದ ತಂದೆ-ಮಗಳು ಕೆರೆಗೆ ತೆರಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಮಗಳು ಕಾಲು ಜಾರಿ ಬಿದ್ದಿದ್ದಾರೆ.

ಈ ವೇಳೆ ಮಗಳು ಫಾತಿಮಾನನ್ನು ರಕ್ಷಿಸಲು ಕೆರೆಗೆ ತೆರಳಿದ್ದ ತಂದೆ ಅಯೂಬ್ ಕೂಡ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!