ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕುತ್ತಿಗೆಗೆ ಬಂದಿದೆ. ಈ ಸಮಸ್ಯೆಗೆ ಕೊಳಚೆ ನೀರನ್ನು ಸಂಸ್ಕರಿಸಿ ಬಳಸುವುದೊಂದೇ ಪರಿಹಾರ ಎಂದು ಜಲತಜ್ಞ ಸುಬ್ರಹ್ಮಣ್ಯ ಕುಸ್ನೂರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪದೇ ಪದೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಬರೀ ಬೆಂಗಳೂರು ಅಷ್ಟೇ ಅಲ್ಲ, ವಿಶ್ವದೆಲ್ಲೆಡೆ ಇರುವ ಸಮಸ್ಯೆಗಳಿಗೂ ಸಂಸ್ಕರಿಸಿದ ಒಳಚರಂಡಿ ನೀರು ಏಕೈಕ ಪರಿಹಾರವಾಗಿದೆ ಎಂದು ಹೇಳಿದ್ದಾರೆ.
ಶೇ.95ರಷ್ಟು ಕೊಳಚೆ ನೀರನ್ನು ಸಾಮಾನ್ಯ ನೀರಿಗೆ ಪರಿವರ್ತಿಸುವ ಮಾರ್ಗವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಇದನ್ನು ತೋಟಗಾರಿಕೆ, ಕಾರುಗಳನ್ನು ತೊಳೆಯಲು ಬಳಸಬಹುದಾಗಿದೆ. ಸಿಂಗಾಪುರದಂಥಹ ರಾಷ್ಟ್ರದಲ್ಲಿಯೂ ಈ ರೀತಿಯೇ ಮಾಡುತ್ತಾರೆ ಎಂದು ಹೇಳಿದ್ದಾರೆ.