ನನ್ನಿಂದ ತಪ್ಪಾಗಿದೆ, ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು: ಕ್ಷಮೆಯಾಚಿಸಿದ ವಿನಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ‘ಬಿಗ್ ಬಾಸ್’ ಖ್ಯಾತಿಯ ವಿನಯ್ ಇಂದು ಜೈಲಿಂದ ರಿಲೀಸ್‌ ಆಗಿದ್ದು, ಬೆನ್ನಲ್ಲೇ ಸೋಶಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ಗೆ ಕ್ಷಮೆಯಾಚಿಸಿದ್ದಾರೆ.

ನನ್ನಿಂದ ತಪ್ಪಾಗಿದೆ. ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು, ಕರ್ನಾಟಕದ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಕ್ಷಮೆ ಕೇಳ್ತೀನಿ. ಕಳೆದ ನಾಲ್ಕು ದಿನದಿಂದ ನೀವು ಟಿವಿಯಲ್ಲಿ ನೋಡಿರಬಹುದು. ಒಂದು ಮಚ್ಚಿನ ಕಥೆ ನಡೆಯುತ್ತಿದೆ. ಪ್ರತಿ ಒಬ್ಬರಿಗೂ ನನ್ನ ಫ್ಯಾಮಿಲಿ ಹಾಗೂ ಫ್ಯಾನ್ಸ್‌ಗೆ ಕ್ಷಮೆ ಕೇಳಬೇಕು ಅಂತಾನೇ ವಿಡಿಯೋ ಮಾಡ್ತಿದ್ದೀನಿ. ನನ್ನಿಂದ ನನ್ನ ಹೆಂಡತಿ, ಮಗ, ಸ್ನೇಹಿತರಿಗೆ ತೊಂದರೆ ಆಗಿದೆ, ದಯವಿಟ್ಟು ಕ್ಷಮಿಸಿ ಬಿಡಿ ಎಂದು ಹೇಳಿದ್ದಾರೆ.

ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಾಗಿತ್ತು. ನಾನು ಈ ರೀತಿ ಮೆಸೇಜ್ ನನ್ನ ಫಾಲೋವರ್ಸ್‌ಗೆ ಕೊಡಬಾರದಿತ್ತು ಕ್ಷಮಿಸಿ. ಸಂಕಷ್ಟದ ಸಮಯದಲ್ಲಿ ನಿಂತವರಿಗೆ ವಿನಯ್ ಕೃತಜ್ಞತೆ ಸಲ್ಲಿಸಿದ್ದಾರೆ.

ಕಾಮನ್ ಮ್ಯಾನ್ ಸೆಲೆಬ್ರೇಟಿ ಅಂತ ನೋಡದೆ, ಪೊಲೀಸರು ಸರಿಯಾಗಿ ತನಿಖೆ ಮಾಡಿದ್ದಾರೆ. ನಮ್ಮನ್ನು ಚೆನ್ನಾಗಿ ಟ್ರೀಟ್ ಮಾಡಿದ್ದಾರೆ. ದಯವಿಟ್ಟು ಪೊಲೀಸ್ ಅವರ ಮೇಲೆ ಯಾವುದೇ ಆರೋಪ ಮಾಡಬೇಡಿ. ಕಾಮನ್ ಮ್ಯಾನ್ ಹಾಗೆಯೇ ನಮ್ಮನ್ನ ಟ್ರೀಟ್ ಮಾಡಿದ್ದಾರೆ. ಇನ್ನೂ ಪೊಲೀಸ್ ಅವರು ನಮ್ಮಿಂದ ಹಣ ಪಡೆದ್ದಿದ್ದಾರೆ ಅನ್ನೋದೆಲ್ಲ ಸುಳ್ಳು ವದಂತಿ ಎಂದಿದ್ದಾರೆ. ಪೊಲೀಸರು ನಮಗೆ ಹಾಗೆಯೇ ಮಾಡಿಲ್ಲ. ಕಾನೂನು ಬದ್ಧವಾಗಿ ತನಿಖೆ ಮಾಡಿದ್ದಾರೆ ಎನ್ನುತ್ತಾ ಅಧಿಕಾರಿ ಎಸಿಪಿ ಚಂದನ್ ಸರ್ ಅವರ ತಂಡಕ್ಕೆ ವಿನಯ್ ಧನ್ಯವಾದ ಹೇಳಿದ್ದಾರೆ.

ನಮ್ಮಿಂದ ಗೊತ್ತಿಲ್ಲದೇ ಆಗಿರೋ ತಪ್ಪಿಗೆ ತಿದ್ದಿ ಬುದ್ಧಿ ಹೇಳಿದ್ದಾರೆ . ಇನ್ನೊಂದು ಸಲ ಈ ತರ ತಪ್ಪು ನಾನೆಂದು ಮಾಡಲ್ಲ. ಸಾಮಾನ್ಯರೊಂದಿಗೆ ಪೊಲೀಸರು ಹೇಗೆ ನಡೆದುಕೊಳ್ತಾರೋ, ಹಾಗೆ ನಮ್ಮೊಂದಿಗೂ ನಡೆದುಕೊಳ್ತಾರೆ. ಎಲ್ಲೂ ನಮ್ಮೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ ಎಂದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!