ಜೈ ಭೀಮ್, ಜೈ ಸಂವಿಧಾನ್: ಡಾ.ಬಿ.ಆರ್.ಅಂಬೇಡ್ಕರ್ ಗೆ ‘ರಾಗಾ’ ಪುಷ್ಪ ನಮನ

ಹೊಸದಿಗಂತ ಡಿಜಿಟಲ್ ಡೆಸ್ಕ್:

69ನೇ ಮಹಾಪರಿನಿರ್ವಾಣ ದಿವಸ್‌ ಅಂಗವಾಗಿ ಸಂಸತ್‌ ಭವನದ ಲಾನ್ಸ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ದೇಶವಾಸಿಗಳಿಗೆ ಅತ್ಯಂತ ಶಕ್ತಿಶಾಲಿ ಸಾಧನವಾಗಿರುವ ಬಾಬಾ ಸಾಹೇಬ್ ಅವರ ಸಂವಿಧಾನವನ್ನು ರಕ್ಷಿಸಲು ನಾನು ಬದ್ಧನಾಗಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು.

“ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಅವರಿಗೆ ವಿನಮ್ರ ನಮನಗಳು. ಸಾಮಾಜಿಕ ಸಮಾನತೆ, ನ್ಯಾಯ ಮತ್ತು ಹಕ್ಕುಗಳ ಸ್ಫೂರ್ತಿಯ ಆಧಾರದ ಮೇಲೆ ಬಾಬಾ ಸಾಹೇಬ್ ಅವರ ಸಂವಿಧಾನವು ದೇಶವಾಸಿಗಳಿಗೆ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ ಮತ್ತು ಅದನ್ನು ರಕ್ಷಿಸಲು ನಾನು ಯಾವಾಗಲೂ ಬದ್ಧನಾಗಿದ್ದೇನೆ. ಅವರಿಗೆ ನನ್ನ ನಮನ. ಸಂವಿಧಾನ ಶಿಲ್ಪಿ ಜೈ ಭೀಮ್, ಜೈ ಸಂವಿಧಾನ್!” ಎಂದು ರಾಹುಲ್ ಗಾಂಧಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here