ವೆಂಕಯ್ಯ ನಾಯ್ಡು ಅವರನ್ನು ಜಾಲತಾಣದಲ್ಲಿ ಕೊಂಡಾಡಿದ ಜೈರಾಮ್ ರಮೇಶ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಪ್ಪವರಪು ವೆಂಕಯ್ಯ ನಾಯ್ಡು ಅಧಿಕಾರಾವಧಿಗೆ ತೆರೆಬಿದ್ದಿದೆ. ಅವರ ಹಾಸ್ಯ, ಬುದ್ಧಿವಂತಿಕೆಯನ್ನು ನಾವು ಇನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಅವರು ವಿರೋಧ ಪಕ್ಷದವರೆಲ್ಲರನ್ನು ಬಹುತೇಕ ಸಂದರ್ಭಗಳಲ್ಲಿ ಕೆರಳಿಸುತ್ತಿದ್ದರು. ಆದರೂ, ಒಬ್ಬ ಒಳ್ಳೆಯ ವ್ಯಕ್ತಿಯ ನಿರ್ಗಮನವಾಗುತ್ತಿದೆ. ಅವರು ನಿವೃತ್ತರಾಗಿರಬಹುದು, ಆದರೆ ಅವರು ದಣಿಯುವುದಿಲ್ಲ ಎಂದು ನನಗೆ ತಿಳಿದಿದೆ…
ಹೀಗೆಂದು ಟ್ವಿಟರ್‌ನಲ್ಲಿ  ವೆಂಕಯ್ಯ ನಾಯ್ಡು ಅವರನ್ನು ಕೊಂಡಾಡಿದ್ದಾರೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್.
ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಅವರನ್ನು ಬಿಜೆಪಿ ಘೋಷಿಸಿದ ಬೆನ್ನಿಗೇ, ಜೈರಾಮ್ ರಮೇಶ್ ಅವರು ನಾಯ್ಡು ನಿರ್ಗಮನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ವೆಂಕಯ್ಯ ನಾಯ್ಡು ಅವರು ೨೦೧೭ರ ಆಗಸ್ಟ್ ೧೧ರಂದು ಉಪ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ ೬ರಂದು ಚುನಾವಣೆ ನಿಗದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!