ಅಯೋಧ್ಯೆನಗರಿಯಲ್ಲಿ ಜನ ಸಾಗರ: ಶ್ರೀ ರಾಮನ ದರುಶನ ಪಡೆದ 2 ಲಕ್ಷ ಭಕ್ತರು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹೊಸ ವರ್ಷದ ಮೊದಲ ದಿನವೇ ಅಯೋಧ್ಯೆನಗರಿಯಲ್ಲಿ ಜನ ಸಾಗರವಾಗಿದೆ. ಜನವರಿ 1ರ ಸಂಜೆ 5 ಗಂಟೆಯವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಅಯೋಧ್ಯೆಯತ್ತ ಭೇಟಿ ನೀಡಿ ವಿರಾಜಿತ ಬಾಲಕ ರಾಮನ ದರುಶನ ಪಡೆದಿದ್ದಾರೆ.

ಜನವರಿ 1 ರಂದು ಬೆಳಗ್ಗೆ 7 ಗಂಟೆಯಿಂದ ಶ್ರೀರಾಮ ಲಲ್ಲಾನ ದರುಶನಕ್ಕೆ ಅನುವು ಮಾಡಿಕೊಡಲಾಗಿದೆ. ಒಟ್ಟು 5 ಸರತಿ ಸಾಲುಗಳಲ್ಲಿ ಭಕ್ತರಿಗೆ ದರುಶನ ವ್ಯವಸ್ಥೆ ಮಾಡಲಾಗುತ್ತಿದೆ. 2 ಲಕ್ಷ ಭಕ್ತರು ರಾಮನ ದರುಶನ ಪಡೆದಿದ್ದಾರೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್‌ನ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ.

ಸಂಜೆ 5 ಗಂಟೆಯವರೆಗೆ 2 ಲಕ್ಷ ಭಕ್ತರು ಅಯೋಧ್ಯೆ ರಾಮನ ದರುಶನ ಪಡೆದಿದ್ದಾರೆ. ರಾತ್ರಿ 9 ಗಂಟೆಯವರೆಗೆ ಭಕ್ತರಿಗೆ ದರುಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಈಗಲೂ ಬಾಲಕ ರಾಮನ ದರುಶನ ಪಡೆದರು.

ಚಳಿಗಾಲ ಮತ್ತು ರಜಾ ಸೀಸನ್ ಆಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದು ರಾಮ ಟೆಂಪಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!