ಜೆಡಿಎಸ್​ ಬಿಟ್ಟು ಹೊರಟ್ಟಿ ಹೊರಟರು… ಅವರು 101ನೇಯವರು: ಹೆಚ್.​ಡಿ ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜೆಡಿಎಸ್​ ಬಿಟ್ಟು ಅನೇಕ ಮಂದಿ ಹೋಗಿದ್ದಾರೆ, ಹೀಗೆ ಹೋದವರ ಪೈಕಿ ಬಸವರಾಜ ಹೊರಟ್ಟಿ 101ನೇಯವರು, ಆದರೂ ಪಕ್ಷ ಉಳಿದಿದೆ’ ಎಂದು ಮಾಜಿ ಮುಖ್ಯಮಂತ್ರಿ ಹೆಚ್.​ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಸಭಾಪತಿ ಹೊರಟ್ಟಿ ಹೇಳಿಕೆಯಿಂದ ಮೊದಲಿಗೆ ನನಗೆ ಶಾಕ್​ ಆಗಲಿಲ್ಲ. ಯಾಕಂದ್ರೆ, ಹೊರಟ್ಟಿ ಹೋದ್ರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು? ಪಕ್ಷಕ್ಕೆ ಮತ್ತೊಬ್ಬ ಹೊರಟ್ಟಿ, ಮತ್ತೊಬ್ಬ ಕೋನರೆಡ್ಡಿ ಬರಬಹುದು.
ಅಷ್ಟಕ್ಕೂ ನಾವು ಅವರನ್ನು ಸಭಾಪತಿ ಮಾಡಿದ್ದು ಬಿಜೆಪಿಗೆ ಹೋಗಲಿಕ್ಕಾ? ಬಿಜೆಪಿಗೆ ಹೋಗ್ತೀವಿ ಅಂದ್ರೆ ಬೇಡ ಅಂತಾ ಗೋಗರೆಯೋಕೆ ಆಗುತ್ತಾ? ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಭಾಪತಿ ಬಸವರಾಜ ಹೊರಟ್ಟಿ ಜೆಡಿಎಸ್‌ ತೊರೆದು ಬಿಜೆಪಿ ಸೇರಲು ಮುಂದಾಗಿದ್ದು, ಶೀಘ್ರದಲ್ಲೇ ಕಮಲ ಹಡಿಯುವುದು ಪಕ್ಕಾ ಎಂದು ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!