ಅಸ್ಸಾಮಿನ ಹಿಂದು ಬಾಹುಳ್ಯದ ಸಿಲ್ಚಾರ್ ಪ್ರವಾಹದ ಹಿಂದೆ ಜಿಹಾದಿ ಕೈವಾಡ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚೆಗೆ ಅಸ್ಸಾಂನಲ್ಲಿ ಸಂಭವಿಸಿದ ಭೀಕರ ಮಾನವ ನಿರ್ಮಿತ ಪ್ರವಾಹದ ಹಿಂದೆ ಕೆಲ ದುಷ್ಕರ್ಮಿಗಳ ಕೈವಾಡವಿರುವುದು ಪತ್ತೆಯಾಗಿದೆ. ಸಿಲ್ಚಾರ್‌ ಪ್ರದೇಶದಲ್ಲಿ ನದಿಯ ಒಡ್ಡು ಒಡೆದ ಪರಿಣಾಮ ಭಾರೀ ಅನಾಹುತ ಸಂಭವಿಸಿದೆ. ಈ ದುಷ್ಕೃತ್ಯವೆಸಗಿದ ಮೂವರನ್ನು ಕ್ಯಾಚಾರ್‌ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಬಂಧಿತರನ್ನು ಮಿಥು ಹುಸೇನ್‌ ಖಾನ್‌, ಕಾಬುಲ್‌ ಖಾನ್‌ ಹಾಗೂ ರಿಪ್ಓನ್ ಖಾನ್‌ ‌ ಎಂದು ಗುರುತಿಸಲಾಗಿದ್ದು ನೀರಿನ ಒಡ್ಡು ಒಡೆದು ಪ್ರವಾಹಕ್ಕೆ ಕಾರಣವಾದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಈ ಮೂವರು ದುಷ್ಕರ್ಮಿಗಳು ಪಟ್ಟಣ ಕೇಂದ್ರದಿಂದ 3 ಕಿಲೋಮೀಟರ್‌ ದೂರದಲ್ಲಿರುವ ಬೇತುಕಂಡಿಯಲ್ಲಿ ಬರಾಕ್‌ ನದಿಯ ಒಡ್ಡುಗಳನ್ನು ಒಡೆದು ಹಾಕಿದ್ದರು. ಭಾರೀ ಮಳೆಯಿಂದ ನದಿನೀರು ಪಟ್ಟಣದೊಳಗೆ ನುಗ್ಗಿ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿತ್ತು. ಸಿಲ್ಚಾರ್‌ ಪಟ್ಟಣವು ಅತಿಕೆಟ್ಟದಾಗಿ ಬಾಧಿತವಾಗಿತ್ತು.

ಅಸ್ಸಾಂನ ಸಿಲ್ಚಾರ್‌ ಹಿಂದೂ ಬಾಹುಳ್ಯದ ಪ್ರದೇಶವಾಗಿದ್ದು ಅವರಿಗೆ ತೊಂದರೆ ಕೊಡುವ ದುರುದ್ದೇಶದಿಂದ ಜಿಹಾದ್‌ ಮಾಡಲಾಗಿದೆ ಎಂಬ ಚರ್ಚೆಗಳು ಈಗ ಎದ್ದಿವೆ. ಪ್ರಸ್ತುತ ಮೂವರನ್ನು ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

“ಸಿಲ್ಚಾರ್‌ ಪ್ರವಾಹವು ಮಾನವ ನಿರ್ಮಿತವಾಗಿದೆ, ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರು ಈ ಹಿಂದೆಯೇ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!