ಕಾಂಗ್ರೆಸ್-ಬಿಜೆಪಿ ಮದ್ಯೆ ನಡೆಯುತ್ತಿರುವ ಜುಗಲ್‌ಬಂದಿ ಚುನಾವಣೆಯಲ್ಲಿ ಬಯಲಾಗಲಿದೆ: ಕೇಜ್ರಿವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಚುನಾವಣೆಗೆ ಮುನ್ನ ದಿಟ್ಟ ಹೇಳಿಕೆ ನೀಡಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮುಂಬರುವ ವಿಧಾನಸಭಾ ಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ದೀರ್ಘಕಾಲದ ಮೈತ್ರಿಯನ್ನು ಬಯಲು ಮಾಡಲಿದೆ ಎಂದು ಹೇಳಿದ್ದು, ಇದನ್ನು ಜುಗಲ್ಬಂದಿ ಎಂದು ಬಣ್ಣಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇಜ್ರಿವಾಲ್, “ನಾನು ರಾಹುಲ್ ಗಾಂಧಿ ಬಗ್ಗೆ ಕೇವಲ ಒಂದು ಸಾಲನ್ನು ಹೇಳಿದ್ದೇನೆ ಮತ್ತು ಬಿಜೆಪಿಯಿಂದ ಉತ್ತರ ಬರುತ್ತಿದೆ. ನೋಡಿ ಬಿಜೆಪಿ ಎಷ್ಟು ತೊಂದರೆ ಎದುರಿಸುತ್ತಿದೆ. ಬಹುಶಃ ಈ ದೆಹಲಿ ಚುನಾವಣೆಯು ಅದರ ಹಿಂದೆ ನಡೆಯುತ್ತಿರುವ ‘ಜುಗಲ್‌ಬಂದಿ’ಯನ್ನು ಬಹಿರಂಗಪಡಿಸುತ್ತದೆ” ಎಂದು ಹೇಳಿದ್ದಾರೆ.

“ಇಂದು ರಾಹುಲ್ ಗಾಂಧಿ ದೆಹಲಿಗೆ ಬಂದಿದ್ದಾರೆ. ಅವರು ನನ್ನನ್ನು ತುಂಬಾ ನಿಂದಿಸಿದ್ದಾರೆ. ಆದರೆ ಅವರ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರ ಹೋರಾಟ ಕಾಂಗ್ರೆಸ್ ಉಳಿಸಲು, ನನ್ನ ಹೋರಾಟ ದೇಶವನ್ನು ಉಳಿಸಲು” ಎಂದು ಕೇಜ್ರಿವಾಲ್ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!