ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಎಸಿಬಿ ಬಲೆಗೆ

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಿಕ್ಯಾಳ ಹಾಗೂ ಪಾಲಿಕೆ ಅಕೌಂಟೆಂಟ್ ಚೆನ್ನಪ್ಪ ಅವರು ಬಿಲ್ ಒಂದನ್ನು ಪಾಸ್ ಮಾಡಲು ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೊರೋನಾ ಸುರಕ್ಷಾ ಚಕ್ರದ, 7.50 ಲಕ್ಷ ರೂಪಾಯಿ ಬಿಲ್ ಪಾಸ್ ಮಾಡಲು, ನಿರ್ದೇಶಕ ಶರಣ ಅವರಿಗೆ ಶಂಕ್ರಣ್ಣ ವಣಿಕ್ಯಾಳ, 2% ಕಮಿಷನ್ ಕೇಳಿದ್ದರು. ಅದರಂತೆ ಪಾಲಿಕೆ ಅಕೌಂಟೆಂಟ್ ಚೆನ್ನಪ್ಪ, 14 ಸಾವಿರ 500 ಲಂಚ ಪಡೆದಾಗ ಎಸಿಬಿ ಬಲೆಗೆ ಬಿದಿದ್ದಾರೆ.

ಕೊರೋನಾ ಸುರಕ್ಷಾ ಚಕ್ರದ ನಿರ್ದೇಶಕ ಶರಣ್ ನೀಡಿದ ದೂರಿನ ಆಧಾರದ ಮೇಲೆ ಟ್ರ್ಯಾಪ್ ಮಾಡಿ, ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಲಂಚ ಪಡೆದ ಅಕೌಂಟೆಂಟ್ ಚೆನ್ನಪ್ಪ, ಬಳಿಕ ಎಸಿಬಿ ಅಧಿಕಾರಿಗಳ ಮುಂದೆ ಕಮಿಷನರ್ ಶಂಕ್ರಣ್ಣ ವಣಿಕ್ಯಾಳಗೆ ಕರೆ ಮಾಡಿ ಹಣ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದ, ಕಮಿಷನರ್ ವಣಿಕ್ಯಾಳ, ಹಣ ಮನೆಗೆ ತೆಗೆದುಕೊಂಡು ಬಂದು ನೀಡುವಂತೆ ಚನ್ನಪ್ಪನಿಗೆ ಹೇಳಿದ್ದ.

ಎಸಿಬಿ ದಾಳಿ ವೇಳೆ ಅಕೌಂಟೆಂಟ್ ಚನ್ನಪ್ಪ ಬಳಿ ಇನ್ನೂ 1ಲಕ್ಷ 45 ಸಾವಿರ ಹಣ ಇರುವುದು ಪತ್ತೆಯಾಗಿದ್ದು, ಅದು ಕೂಡಾ ಕಮಿಷನರ್‌ಗರ ನೀಡೋದಕ್ಕೆ ಇಟ್ಟಿದ್ದ ಹಣ ಅಂತಾ ಹೇಳಿದ್ದ ಅಕೌಂಟೆಂಟ್ ಚೆನ್ನಪ್ಪ ಎಸಿಬಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ. ಚೆನ್ನಪ್ಪ ಹಾಗೂ ಕಮಿಷನರ್ ನಡುವೆ ನಡೆದ ಆಡಿಯೋ ಸಂಭಾಷಣೆ ಕೂಡ ಎಸಿಬಿ ಅಧಿಕಾರಿಗಳು ಪಡೆದಿದ್ದಾರೆ. ಸದ್ಯ ಎಸಿಬಿ ಅಧಿಕಾರಿಗಳಿಂದ ಕಮಿಷನರ್ ಶಂಕ್ರಣ್ಣ ವಣಿಕ್ಯಾಳ, ಅಕೌಂಟೆಂಟ್ ಚೆನ್ನಪ್ಪನನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!