ಕಲಬುರಗಿ | ರಜೆ ರದ್ದುಪಡಿಸಿ ಕರ್ತವ್ಯಕ್ಕೆ ತೆರಳಿದ ಯೋಧ

ಹೊಸ ದಿಗಂತ ವರದಿ, ಕಲಬುರಗಿ:

ಹತ್ತು ದಿನಗಳ ರಜೆ ಪಡೆದು ತವರಿಗೆ ಆಗಮಿಸಿದ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದ ಯೋಧ ರಾಮಚಂದ್ರ ಭಾನುದಾಸ ಪುಲಾರೆ ಅವರು, ಭಾರತ ಪಾಕಿಸ್ತಾನ ಸಂಘರ್ಷದ ಹಿನ್ನಲೆ ರಜೆ ರದ್ದು ಪಡಿಸಿ, ಕರ್ತವ್ಯಕ್ಕೆ ಹಾಜರಾಗಲು ವಾಪಸ್ ತೆರಳಿದ್ದಾರೆ.

ಕಳೆದ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿರುವ ರಾಮಚಂದ್ರ ಪುಲಾರೆ ಅವರು, ಇದೇ ಮೇ.5 ರಂದು ಹತ್ತು ದಿನಗಳ ರಜೆ ಪಡೆದು ತವರಿಗೆ ಬಂದಿದ್ದರು. ಮರಳಿ ಇದೇ ಮೇ.14 ರಂದು ತೆರಳಬೇಕಿತ್ತು. ಆದರೆ, ಭಾರತ ಪಾಕಿಸ್ತಾನದ ಸಂಘರ್ಷದ ಹಿನ್ನಲೆ, ತುರ್ತು ಪರಿಸ್ಥಿತಿ ಕಾರಣ ಸೇವೆಗೆ ಹಾಜರಾಗಲು ಶನಿವಾರ ಬೆಳಗಿನ ಜಾವ 5 ಗಂಟೆಗೆ ಕನ್ಯಾಕುಮಾರಿ ಎಕ್ಸ್ ಪ್ರೆಸ್ ರೈಲು ಮೂಲಕ ವಾಪಸ್ ತೆರಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!