ಹೊಸದಿಗಂತ , ಬಳ್ಳಾರಿ:
ಗಣಿನಗರಿ ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.
ನಗರದ ಸಂಗನಕಲ್ಲು ರಸ್ತೆಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ ಕುಮಾರ್ ಮೊಕ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು, ತಾ.ಪಂ.ಮಾಜಿ ಸದಸ್ಯ ಟಿ. ಅಡಿವೆಪ್ಪ ಮಟ್ಟಿ, ಅಂಜಿನೆಪ್ಪ ಗಾಣಗಾತಿ, ಟಿ.ಚಂದ್ರಪ್ಪ ಸ್ವಾಮಿ, ಹಳ್ಳಿ ಮರಿಬಸಪ್ಪ, ಸೇರಿದಂತೆ ಸುಮಾರು ಜನರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗಾಳಿ ಶಂಕರಪ್ಪ, ಉಳುರು ಸಿದ್ದೇಶ, ರಾಜೀವ್ ತೊಗರಿ ಇದ್ದರು.