ಕನ್ನಡ ಚಿತ್ರರಂಗವೇ ನನ್ನ ಜೀವಾಳ, ಹಿಂದಿ ಸಿನಿಮಾ ಮಾಡಲ್ಲ: ರಿಷಬ್ ಶೆಟ್ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಇಡೀ ವಿಶ್ವದಲ್ಲಿ ಸದ್ದು ಮಾಡುತ್ತಿದ್ದು, ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಪರಭಾಷೆಯವರು ಫುಲ್​ಮಾರ್ಕ್ಸ ನೀಡಿದ್ದಾರೆ.
ಇದೀಗ ಈ ಚಿತ್ರ ಹಿಟ್ ಆದ ಬಳಿಕ ರಿಷಬ್ ಶೆಟ್ಟಿ ಗೆ ಪರಭಾಷೆಯವರಿಂದಲೂ ಆಫರ್ ಬರುತ್ತಿದೆ. ಹಿಂದಿಯಲ್ಲಿ ಸಿನಿಮಾ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿತ್ತು. ಇದೀಗ ಇದಕ್ಕೆ ರಿಷಬ್ ಉತ್ತರ ನೀಡಿದ್ದಾರೆ.

ನನಗೆ ಕನ್ನಡ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ನಾನು ಹೆಮ್ಮೆಯ ಕನ್ನಡಿಗ. ಕನ್ನಡ ಸಿನಿಮಾ ರಂಗ ಹಾಗೂ ಕನ್ನಡಿಗರಿಂದ ನಾನು ಇಲ್ಲಿದ್ದೇನೆ. ಒಂದು ಸಿನಿಮಾ ಹಿಟ್ ಆಗಿದ್ದಕ್ಕೆ ನನ್ನ ಕುಟುಂಬ ಹಾಗೂ ಗೆಳೆಯರು ಬದಲಾಗುವುದಿಲ್ಲ. ಕನ್ನಡ ಚಿತ್ರರಂಗವೇ ನನ್ನ ಜೀವಾಳ ಎಂದು ಬಾಲಿವುಡ್​ ಬಬಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನನ್ನ ಸಿನಿಮಾಗಳನ್ನು ಜನರು ಇಷ್ಟಪಟ್ಟರೆ ಅದನ್ನು ಹಿಂದಿಯಲ್ಲಿ ರಿಲೀಸ್ ಮಾಡುತ್ತೇನೆ. ಇಲ್ಲವಾದರೆ ಕರ್ನಾಟಕದಲ್ಲಿ ಮಾತ್ರ ಆ ಸಿನಿಮಾ ರಿಲೀಸ್ ಆಗುತ್ತದೆ. ಕಾಂತಾರ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುವ ಆಲೋಚನೆ ಇರಲಿಲ್ಲ. ಆದರೆ, ಈ ಸಿನಿಮಾವೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲು ದಾರಿ ಕಂಡುಕೊಂಡಿತು ಎಂದಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!