ಹೊಸದಿಗಂತ ವರದಿ ಬೆಳ್ತಂಗಡಿ:
ಕಾಂತಾರ ಚಲನಚಿತ್ರದ ನಟ ರಿಷಭ್ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ ಜೊತೆಗೆ ಬುಧವಾರ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್. ಸುಭಾಶ್ಚಂದ್ರ ಅವರು ರಿಷಭ್ ಶೆಟ್ಟಿ- ಪ್ರಗತಿ ಶೆಟ್ಟಿ ದಂಪತಿಗೆ ಪೇಟ ತೊಡಿಸಿ, ಹಾರರ್ಪಣೆಗೈದು ಸನ್ಮಾನಿಸಿ ಗೌರವಿಸಿದರು.
ಕ್ಷೇತ್ರದ ಪರವಾಗಿ ಐ.ಬಿ. ಸಂದೀಪ್ ಕುಮಾರ್ ರಿಷಭ್ ಶೆಟ್ಟಿ ದಂಪತಿಯನ್ನು ಕ್ಷೇತ್ರಕ್ಕೆ ಬರಮಾಡಿಕೊಂಡರು. ಈ ಸಂದರ್ಭ ನಟ ಪ್ರಮೋದ್ ಶೆಟ್ಟಿ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ ಮತ್ತಿತರರು ಉಪಸ್ಥಿತರಿದ್ದರು.