ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡಿಗರ ಮೇಲೆ ಹಲ್ಲೆ ಪ್ರಕರಣ ಖಂಡಿಸಿ, ನಾಳೆ ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡಿದೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಬಂದ್ ಗೆ ಕರೆ ನೀಡಲಾಗಿದೆ.
ಏನಿರುತ್ತೆ?
ಅಗತ್ಯ ಪೂರೈಕೆ ಸೇವೆಗಳು ಎಂದಿನಂತೆ ಲಭ್ಯ:
ಹಾಲು, ತರಕಾರಿ, ದಿನಸಿ ಅಂಗಡಿಗಳು
ಆಸ್ಪತ್ರೆ, ಮೆಡಿಕಲ್ ಸ್ಟೋರ್
ರೈಲು, ವಿಮಾನ ಸೇವೆ
ಏನಿರಲ್ಲ?
ನಮ್ಮ ಮೆಟ್ರೋ ಸಂಚಾರ
ಚಿತ್ರಮಂದಿರಗಳು
ಸಿನಿಮಾ ಶೂಟಿಂಗ್
ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ
ಆಟೋ, ಟ್ಯಾಕ್ಸಿ ಸಂಚಾರ
ಹೋಟೆಲ್ ಓಪನ್: ಬಂದ್ ಗೆ ನಮ್ಮ ಬೆಂಬಲವಿದೆ, ಆದರೆ ಹೋಟೆಲ್ ಅಗತ್ಯಸೇವೆಗಳು ಆದ್ದರಿಂದ ಹೋಟೆಲ್ ಬಂದ್ ಮಾಡಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.